ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವದು ಎಂಬ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಸಂಬಂಧಿಸಿದಂತೆ, ಬಡವರ ಸವಲತ್ತು ಕಿತ್ತುಕೊಳ್ಳಲು ಸರ್ಕಾರವೇ ಹೂಡುತ್ತಿರುವ ಹುನ್ನಾರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, TV/ಬೈಕ್ ಇದ್ದರೆ BPLಕಾರ್ಡ್ ರದ್ದು ಮಾಡುವ ಉಮೇಶ್ ಕತ್ತಿಯವರ ಹೇಳಿಕೆ ಬಡತನದ ಬದಲು ಬಡವರನ್ನೇ ನಿರ್ಮೂಲನ ಮಾಡುವ ಮನಸ್ಥಿತಿಯ ಪ್ರತೀಕ. ಸಾವಿಲ್ಲದ ಮನೆಯ ಸಾಸಿವೆ ಕಾಳು ತರಲು ಹೇಗೆ ಸಾಧ್ಯವಿಲ್ಲವೋ,ಇಂದು TV ಇಲ್ಲದ ಮನೆಯನ್ನು ಹುಡಕಲು ಅಸಾಧ್ಯ. ಸರ್ಕಾರ BPLಕಾರ್ಡ್ ನೀಡುವ ಮಾನದಂಡ ಮೊದಲು ಬದಲಾಯಿಸಿಕೊಳ್ಳಲಿ.
BPL ಕಾರ್ಡ್ ನೀಡಲು ಕುಟುಂಬದ ಆದಾಯ ಮಾನದಂಡವಾಗಬೇಕೆ ಹೊರತು ಟಿವಿ ಬೈಕ್ಗಳಲ್ಲ. ಉಮೇಶ್ ಕತ್ತಿಯವರ ಹೇಳಿಕೆ ಈ ಸರ್ಕಾರಕ್ಕೆ ಬಡವರ ಮೇಲೆ ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತಿದೆ. ಬಡವರ ಸವಲತ್ತು ಕಿತ್ತುಕೊಳ್ಳಲು ಸರ್ಕಾರವೇ ಹೂಡುತ್ತಿರುವ ಹುನ್ನಾರವಿದು. ರಾಜ್ಯ ಬಿಜೆಪಿ ತಮ್ಮದು ಬಡವರ ಪರ ಸರ್ಕಾರ ಎಂದು ಹೇಳಲು ಯಾವ ನಾಲಿಗೆಯಿದೆ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
1
TV/ಬೈಕ್ ಇದ್ದರೆ BPLಕಾರ್ಡ್ ರದ್ದು ಮಾಡುವ ಉಮೇಶ್ ಕತ್ತಿಯವರ ಹೇಳಿಕೆ ಬಡತನದ ಬದಲು ಬಡವರನ್ನೇ ನಿರ್ಮೂಲನ ಮಾಡುವ ಮನಸ್ಥಿತಿಯ ಪ್ರತೀಕ.ಸಾವಿಲ್ಲದ ಮನೆಯ ಸಾಸಿವೆ ಕಾಳು ತರಲು ಹೇಗೆ ಸಾಧ್ಯವಿಲ್ಲವೋ,ಇಂದು TV ಇಲ್ಲದ ಮನೆಯನ್ನು ಹುಡಕಲು ಅಸಾಧ್ಯ.
ಸರ್ಕಾರ BPLಕಾರ್ಡ್ ನೀಡುವ ಮಾನದಂಡ ಮೊದಲು ಬದಲಾಯಿಸಿಕೊಳ್ಳಲಿ. https://t.co/Q6vfIggMiv
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 15, 2021
2
BPL ಕಾರ್ಡ್ ನೀಡಲು ಕುಟುಂಬದ ಆದಾಯ ಮಾನದಂಡವಾಗಬೇಕೆ ಹೊರತು ಟಿವಿ ಬೈಕ್ಗಳಲ್ಲ.ಉಮೇಶ್ ಕತ್ತಿಯವರ ಹೇಳಿಕೆ ಈ ಸರ್ಕಾರಕ್ಕೆ ಬಡವರ ಮೇಲೆ ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತಿದೆ.
ಬಡವರ ಸವಲತ್ತು ಕಿತ್ತುಕೊಳ್ಳಲು ಸರ್ಕಾರವೇ ಹೂಡುತ್ತಿರುವ ಹುನ್ನಾರವಿದು.@BJP4Karnataka ತಮ್ಮದು ಬಡವರ ಪರ ಸರ್ಕಾರ ಎಂದು ಹೇಳಲು ಯಾವ ನಾಲಿಗೆಯಿದೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 15, 2021