ಕಾರವಾರ (ರಾಜಕೀಯ & ಯೋಜನೆಗಳು): ರಾಜ್ಯದಲ್ಲಿ ಈಗಾಗಲೇ ಯಶಸ್ವಿಯಾಗಿ ‘ಪಂಚ ಗ್ಯಾರಂಟಿ’ಗಳನ್ನು (Pancha Guarantees) ಜಾರಿ ಮಾಡಿರುವ ರಾಜ್ಯ ಸರ್ಕಾರ, ಇದೀಗ ಜನತೆಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದ, ರಾಜ್ಯದ ಜನತೆಗೆ 10ನೇ ಗ್ಯಾರಂಟಿಯನ್ನು ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Ration Card: ಏಪ್ರಿಲ್ 1 ರಿಂದ ರೇಷನ್ ಕಾರ್ಡ್ ಹೊಸ ರೂಲ್ಸ್ ಜಾರಿ; ಈ 4 ತಪ್ಪು ಮಾಡಿದ್ರೆ ನಿಮ್ಮ ಕಾರ್ಡ್ ರದ್ದು!
ಹೌದು, ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS) ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸರ್ಕಾರದ ಮುಂದಿನ ಯೋಜನೆಗಳ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.

ಸರ್ಕಾರದ ಹೊಸ 6 ರಿಂದ 10 ಗ್ಯಾರಂಟಿಗಳು ಯಾವುವು?
ಪಂಚ ಗ್ಯಾರಂಟಿಗಳ ಜೊತೆಗೆ, ಜನಸಾಮಾನ್ಯರ ಮೂಲಭೂತ ಅಗತ್ಯಗಳನ್ನು ಪೂರೈಸುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ ಎಂದ ಡಿ.ಕೆ. ಶಿವಕುಮಾರ್, ಆ ಹೊಸ 5 ಗ್ಯಾರಂಟಿಗಳ ಪಟ್ಟಿಯನ್ನು ತೆರೆದಿಟ್ಟರು:
6ನೇ ಗ್ಯಾರಂಟಿ: ಭೂಮಿ ಒದಗಿಸುವುದು.
7ನೇ ಗ್ಯಾರಂಟಿ: ಕುಡಿಯುವ ನೀರು ನೀಡುವುದು.
8ನೇ ಗ್ಯಾರಂಟಿ: ವಸತಿ ರಹಿತರಿಗೆ ಮನೆ (ಸೂರು) ಕಲ್ಪಿಸುವುದು.
9ನೇ ಗ್ಯಾರಂಟಿ: ಆಸ್ತಿ ಮಾಲೀಕರಿಗೆ ಸುಲಭವಾಗಿ ಇ-ಖಾತಾ (E-Khata) ನೀಡುವುದು.
10ನೇ ಗ್ಯಾರಂಟಿ: ಎಲ್ಲರಿಗೂ ‘ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆ’ ಒದಗಿಸುವುದು!
“ಬಡವರು ಹಾಗೂ ಜನಸಾಮಾನ್ಯರಿಗೆ ಉಚಿತವಾಗಿ ಅತ್ಯುತ್ತಮ ವೈದ್ಯಕೀಯ ಸೇವೆ (Free Healthcare) ಒದಗಿಸುವುದು ನಮ್ಮ 10ನೇ ಗ್ಯಾರಂಟಿಯಾಗಿದ್ದು, ಇದನ್ನು ನಮ್ಮ ಸರ್ಕಾರ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಈ ಘೋಷಣೆ ಇದೀಗ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: Govt Jobs: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಕೂಡಲೇ ಅರ್ಜಿ ಸಲ್ಲಿಸಿ




