ದಾವಣಗೆರೆ: ಕರೋನಾ ಎರಡನೇ ಅಲೆ ಅಬ್ಬರದ ನಡುವೆ ಈಗ ಮೂರನೇ ಅಲೆ ಆತಂಕ ಹೆಚ್ಚಿದೆ. ಭಾರತಕ್ಕೆ ಓವಿಡ್ ಮೂರನೇ ಅಲೆ ಅಪ್ಪಳಿಸುವುದು ಖಚಿತ ಎಂದು ಹೇಳಿರುವ ತಜ್ಞರು ಈಗಲೇ ಜಾಗೃತಿ ವಹಿಸಬೇಕು ಎಂದು ಹೇಳಿದ್ದಾರೆ.
ಕೋವಿಡ್ ಎರಡನೇ ಅಲೆಯ ಆರ್ಭಟದಲ್ಲಿ ಭಾರತಲ್ಲಿ 1.70 ಲಕ್ಷ ಜನ ಸಾವನ್ನಪಿದ್ದಾರೆ. ಮೊದಲ ಅಲೆಗಿಂತ ಎರಡನೇ ಹೆಚ್ಚು ಭೀಕರವಾಗಿತ್ತು. ಇದರಿಂದ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಮೂರನೇ ಅಲೆ ಇದಕ್ಕಿಂತ ಹೆಚ್ಚು ಪರಿಣಾಮಕಾರಿ ಆಗಿರಲಿದೆ ಎಂದು ಎಸ್ಬಿಐ ತಿಳಿಸಿದೆ.
ಕೋವಿಡ್ ಮೂರನೇ ಅಲೆ ತಪ್ಪಿಸಲು ಒಂದೇ ಅಸ್ತ್ರ !
ಹೌದು, ಕೋವಿಡ್ ಮೂರನೇ ಅಲೆ ಭಾರತಕ್ಕೆ ಆವರಿಸುವುದು ಖಚಿತ ಎಂದು ಎಸ್ಬಿಐ ಹೇಳಿದೆ. ದೇಶದಲ್ಲಿ ಆದಷ್ಟು ಹೆಚ್ಚು ಲಸಿಕೆ ನೀಡುವುದರಿಂದ ಮಾತ್ರ ಮೂರನೇ ಅಲೆಯ ತೀವ್ರತೆಯಿಂದ ಪಾರಾಗಬುಹುದು ಎಂದು ಎಸ್ಬಿಐ ಹೇಳಿದೆ.
ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸೂಚನೆ ಇರುವ ಕೋವಿಡ್ ಮೂರನೇ ಅಲೆ ಬಗ್ಗೆ ಸರ್ಕಾರ ಈಗಲೇ ಅಗತ್ಯ ಕ್ರಮಕೂಗೊಳ್ಳಬೇಕು. ಸೋಂಉ ಹರಡಿವಿಕೆಯ ತೀವ್ರತೆ ಕಡಿಮೆ ಮಾಡಲು ಮುಂಜಾಗೃತೆ ವಹಿಸಬೇಕು. ಆದಷ್ಟು ದೇಶ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು. ಆಗ ಮಾತ್ರ ಸಾವಿನ ಸಂಖ್ಯೆ ಹೆಚ್ಚಳ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ.