ಬೆಂಗಳೂರು : ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೊಂದಿಗೆ ಮಾತನಾಡಿ ಶೀಘ್ರ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿ.ಎಂ.ಇಬ್ರಾಹಿಂ ಘೋಷಿಸಿದ್ದಾರೆ.
ನನಗೆ ಸ್ಥಾನ ತಪ್ಪಿದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉತ್ತರಿಸಬೇಕು. ನನಗೂ, ಡಿ.ಕೆ.ಶಿವಕುಮಾರ್ ಗೂ ಹೊಂದಾಣಿಕೆ ಆಗಲ್ಲ. ಆದರೆ ಸಿದ್ದರಾಮಯ್ಯ ಜೊತೆ ಚೆನ್ನಾಗಿದ್ದೆ. ದೆಹಲಿಯಿಂದ ನನಗೆ ಕರೆಗಳು ಬರುತ್ತಿದ್ದು, ಎಲ್ಲವನ್ನೂ ಇಟ್ಟುಕೊಂಡಿದ್ದೇನೆ. ಉತ್ತರ ಪ್ರದೇಶ ಪ್ರಚಾರಕ್ಕೆ ಬರುವಂತೆ ಆಹ್ವಾನಿಸುತ್ತಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ l.
ನಮಗೂ, ಕಾಂಗ್ರೆಸ್ ಗೂ ಮುಗಿದ ಅಧ್ಯಾಯ:
ಇನ್ನು,ನಮಗೂ, ಕಾಂಗ್ರೆಸ್ ಗೂ ಮುಗಿದ ಅಧ್ಯಾಯ ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದ್ದು, ಸಿದ್ದರಾಮಯ್ಯಗಾಗಿ ನಾವು ಹೆಚ್.ಡಿ.ದೇವೇಗೌಡರನ್ನು & ಜೈಲಿನಲ್ಲಿದ್ದುಕೊಂಡೇ ಕಟ್ಟಿದ್ದ ಜೆಡಿಎಸ್ ಪಕ್ಷವನ್ನು ಬಿಟ್ಟಿದ್ದೆವು.
ಈಗಲೇ ಎಲ್ಲವನ್ನೂ ಹೇಳಲ್ಲ. ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂದು ತಿಳಿದು, ಬಾದಾಮಿ ನಾಯಕರನ್ನು ಒಪ್ಪಿಸಿ ನಾಮಪತ್ರ ಹಾಕಿಸಿ ಸಿದ್ದರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟಿದ್ದೆ. ಆದರೆ ಅವರು ನನಗೆ ಒಳ್ಳೆಯ ಉಡುಗೊರೆ ನೀಡಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಬೇಸರ ವ್ಯಕ್ತಪಡಿಸಿದ್ದಾರೆ.