BCCI ಆಟಗಾರರ ಹೊಸ ಗುತ್ತಿಗೆ ಒಪ್ಪಂದ: ಸಂಜುಗೆ ಸ್ಥಾನ, ಭುವನೇಶ್ವರ್, ರಹಾನೆ, ಕನ್ನಡಿಗ ಮಾಯಾಂಕ್ ಆಟ ಅಂತ್ಯವಾಯಿತೇ?

Bhubaneswar, Rahane, Mayank Aggarwal, Sanju Samson Bhubaneswar, Rahane, Mayank Aggarwal, Sanju Samson

ಬಿಸಿಸಿಐನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳದ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಪ್ಪಂದದಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸಿ ಗ್ರೇಡ್‌ನಲ್ಲಿದ್ದು, ವಾರ್ಷಿಕ 3 ಕೋಟಿ ವೇತನ ಪಡೆಯಲಿದ್ದಾರೆ. BCCI ಯ ಅತ್ಯುನ್ನತ ಗ್ರೇಡ್ A+ ಆಗಿದ್ದು ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಈ ಪಟ್ಟಿಯಲ್ಲಿ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್ಪ್ರೀತ್‌ ಬೂಮ್ರಾ ಹಾಗೂ ರವೀಂದ್ರ ಜಡೇಜಾ ಇದ್ದಾರೆ.

ಇದನ್ನು ಓದಿ: 500ರೂ ನೋಟು ನಕಲಿ ಅಥವಾ ಅಸಲಿ ಎಂದು ಗುರುತಿಸುವುದು ಹೇಗೆ? ಈ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಿ

ಭುವನೇಶ್ವರ್, ರಹಾನೆ ಹಾಗು ಕನ್ನಡಿಗ ಮಾಯಾಂಕ್ ಅಗರ್ವಾಲ್ ಆಟ ಅಂತ್ಯವಾಯಿತೇ?

Advertisement

ಇನ್ನ್ನು,ಫಾರ್ಮ್ ಕಳೆದುಕೊಂಡು ಟೀಂ ಇಂಡಿಯಾದಿಂದ ದೂರ ಉಳಿದಿದ್ದ ರಹಾನೆ, ಭುವನೇಶ್ವರ್ ಹಾಗು ಕನ್ನಡಿಗ ಮಾಯಾಂಕ್ ಅಗರ್ವಾಲ್ ಈ ಬಾರಿ ಬಿಸಿಸಿಐ ವಾರ್ಷಿಕ ವೇತನ ಒಪ್ಪಂದದಲ್ಲಿ ಸ್ಥಾನ ಪಡೆದಿಲ್ಲ. ಇದರೊಂದಿಗೆ ಭಾರತ ಮುಂದಿನ ದಿನಗಳಲ್ಲಿ ಆಡಲಿರುವ ಪಂದ್ಯಗಳಲ್ಲಿ ಆಡದೇ ಇರಬಹುದು.

2022-23ರ ಒಪ್ಪಂದದಲ್ಲಿ 26 ಆಟಗಾರರು ಸ್ಥಾನ ಪಡೆದಿದ್ದಾರೆ. ಕಳೆದ ಬಾರಿಯ 7 ಆಟಗಾರರನ್ನು ಈ ಬಾರಿ ಒಪ್ಪಂದದಿಂದ ಕೈಬಿಡಲಾಗಿದೆ. ದೀಪಕ್ ಚಹಾರ್, ಇಶಾಂತ್ ಶರ್ಮಾ, ಹನುಮ ವಿಹಾರಿ, ವೃದ್ಧಿಮಾನ್ ಸಹಾ ಈ ಬಾರಿ ಸ್ಥಾನ ಸಿಕ್ಕಿಲ್ಲ.

ಇದನ್ನು ಓದಿ: CRPF ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

BCCI- ಆಟಗಾರರ ಹೊಸ ಗುತ್ತಿಗೆ ಒಪ್ಪಂದ ಹೀಗಿದೆ;

ಬಿಸಿಸಿಐ ಆಟಗಾರರ ಒಪ್ಪಂದವನ್ನು ನವೀಕರಿಸಿದೆ. ರವೀಂದ್ರ ಜಡೇಜಾ ಬಡ್ತಿ ಪಡೆದರೆ, ಕೆ.ಎಲ್‌. ರಾಹುಲ್‌ ಹಿಂಬಡ್ತಿ ಪಡೆದಿದ್ದಾರೆ.

A+ ಕೆಟಗರಿ (7 ಕೋಟಿ ರೂ.): ರೋಹಿತ್ ಶರ್ಮ, ವಿರಾಟ್‌ ಕೊಹ್ಲಿ, ಜಸ್ಪ್ರೀತ್ ಬುಮ್ರಾ. ರವೀಂದ್ರ ಜಡೇಜಾ

A ಕೆಟಗರಿ (5 ಕೋಟಿ ರೂ.): ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮಹಮದ್ ಶಮಿ, ರಿಷಬ್ ಪಂತ್, ಅಕ್ಷರ್ ಪಟೇಲ್

B ಕೆಟಗರಿ (3 ಕೋಟಿ ರೂ.): ಚೇತೇಶ್ವರ್ ಪೂಜಾರ, ಕೆ ಎಲ್ ರಾಹುಲ್‌, ಶ್ರೇಯಸ್‌ ಅಯ್ಯರ್, ಮಹಮದ್ ಸಿರಾಜ್, ಸೂರ್ಯಕುಮಾರ್‌ ಯಾದವ್ , ಶುಭ್ಮಂ ಗಿಲ್

C ಕೆಟಗರಿ (1 ಕೋಟಿ ರೂ.): ಶಿಖರ್ ಧವನ್, ಶಾರ್ದುಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡ, ಯಜುವೇಂದ್ರ ಚಹಲ್, ಕುಲ್ದೀಪ್‌ ಯಾದವ್, ವಾಷಿಂಗ್ ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ ಎಸ್ ಭರತ್

ಇದನ್ನು ಓದಿ: ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಒಂದೇ ಕನೆಕ್ಷನ್‌ನಲ್ಲಿ 2 ಸಿಮ್‌ಗಳು, ಉಚಿತ DTH, OTT, ಅನಿಯಮಿತ ಡೇಟಾ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು