ಭಗವದ್ಗೀತೆ ಅಧ್ಯಾಯ 1: ಕುಲಧರ್ಮದ ಅಳಿವು ಮತ್ತು ಅರ್ಜುನನ ಅಸಹಾಯಕತೆ (ಶ್ಲೋಕ 43-47)

ಕುರುಕ್ಷೇತ್ರದ ರಣಾಂಗಣದಲ್ಲಿ ಸ್ವಜನರನ್ನೇ ಎದುರಿಸಬೇಕಾದ ಸಂದರ್ಭ ಬಂದಾಗ ಅರ್ಜುನನು ಅನುಭವಿಸಿದ ಮಾನಸಿಕ ಸಂಘರ್ಷದ ಉತ್ತುಂಗವೇ ಈ ಶ್ಲೋಕಗಳು. ಇಲ್ಲಿ ಅರ್ಜುನನು ಕೇವಲ ಯುದ್ಧದ ಬಗ್ಗೆ ಅಂಜುತ್ತಿಲ್ಲ, ಬದಲಾಗಿ ಯುದ್ಧದಿಂದಾಗುವ ಸಾಮಾಜಿಕ ಮತ್ತು ನೈತಿಕ ಪತನದ…

"Arjuna in mental distress on the battlefield of Kurukshetra, dropping his bow and arrows while Krishna looks on, representing Bhagavad Gita Chapter 1, Shlokas 43-47."

ಕುರುಕ್ಷೇತ್ರದ ರಣಾಂಗಣದಲ್ಲಿ ಸ್ವಜನರನ್ನೇ ಎದುರಿಸಬೇಕಾದ ಸಂದರ್ಭ ಬಂದಾಗ ಅರ್ಜುನನು ಅನುಭವಿಸಿದ ಮಾನಸಿಕ ಸಂಘರ್ಷದ ಉತ್ತುಂಗವೇ ಈ ಶ್ಲೋಕಗಳು. ಇಲ್ಲಿ ಅರ್ಜುನನು ಕೇವಲ ಯುದ್ಧದ ಬಗ್ಗೆ ಅಂಜುತ್ತಿಲ್ಲ, ಬದಲಾಗಿ ಯುದ್ಧದಿಂದಾಗುವ ಸಾಮಾಜಿಕ ಮತ್ತು ನೈತಿಕ ಪತನದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾನೆ.


ಶ್ಲೋಕ 43

ದೋಪೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ |
ಉತ್ಪಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ||

ಅರ್ಥ: ಸಮಾಜದ ಬಣ್ಣಗೇಡಿಗೆ ಕಾರಣರಾದ ಕುಲಗೇಡಿಗಳ ಇಂಥ ತಪ್ಪುಗಳಿಂದ ಸಹಜ ಧರ್ಮಗಳು ಮತ್ತು ಅಳಿವಿರದ ಕುಲಧರ್ಮಗಳು ನೆಲೆಗೆಡುತ್ತವೆ.

Vijayaprabha Mobile App free

ಶ್ಲೋಕ 44

ಉತ್ಪನ್ನಕುಲಧರ್ಮಾಣಾಂ ಮನುಷ್ಯಾನಾಂ ಜನಾರ್ದನ |
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ ||

ಅರ್ಥ: ಓ ಜನಾರ್ದನ, ಕುಲ ಧರ್ಮದ ನೆಲೆದಪ್ಪಿದವರಿಗೆ ನರಕವೇ ಮುಗಿಯದ ನೆಲೆ ಎಂದು ಕೇಳಿ ಬಲ್ಲೆವು.

ಶ್ಲೋಕ 45

ಅಹೋ ಬತ ಮಹತ್ ಪಾಪಂ ಕರ್ತುಂ ವ್ಯವಸಿತಾ ವಯಮ್ |
ಯದ್ ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ ||

ಅರ್ಥ: ಅಯ್ಯೋ….! ಎಂಥ ಹಿರಿಯ ತಪ್ಪನ್ನು ಮಾಡತೊಡಗಿದ್ದೆವು ನಾವು! ದೊರೆತನದ ಸುಖದ ದುರಾಸೆಯಿಂದ ನಮ್ಮ ಮಂದಿಯನ್ನೇ ಕೊಲ್ಲ ಹೊರಟಿದ್ದೇವಲ್ಲ!

ಶ್ಲೋಕ 46

ಯದಿ ಮಾಮ್ ಅಪ್ರತೀಕಾರಮ್ ಅಶಸ್ತ್ರಮ್ ಶಸ್ತ್ರಪಾಣಯಃ ।
ಧಾರ್ತರಾಷ್ಟ್ರಾರಣೇ ಹನ್ಯುಸ್ತನ್ನೇ ಕ್ಷೇಮತರಂ ಭವೇತ್ ||

ಅರ್ಥ: ಒಂದೊಮ್ಮೆ ಎದುರು ನಿಂತು ಹೋರಾಡದ, ಆಯುಧ ಹಿಡಿಯದ ನನ್ನನ್ನು ಧಾರ್ತರಾಷ್ಟ್ರರು ಆಯುಧ ಹಿಡಿದು ಕೊಲ್ಲುವುದಾದರೆ ಅದು ನನ್ನ ಭಾಗ್ಯವಾದೀತು.

ಶ್ಲೋಕ 47 (ಸಂಜಯ ಉವಾಚ)

ಏವಮುಜ್ಝಾ ಅರ್ಜುನಃ ಸಂಖೇ ರಥೋಪಸ್ಥ ಉಪಾವಿಶತ್ |
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ||

ಅರ್ಥ: ಸಂಜಯ ಹೇಳಿದನು: ಕಾಳಗದ ಕಣದಲ್ಲಿ ಅರ್ಜುನ ಬಿಲ್ಲು ಬಾಣಗಳನ್ನು ಬಿಸುಟು, ಅಳಲಿನಿಂದ ತಳಮಳಿಸುತ್ತ ತೇರ ಮಡಿಲಲ್ಲಿ ಕುಳಿತುಬಿಟ್ಟ.

ಸಂಕ್ಷಿಪ್ತ ಸಾರಾಂಶ:

ಅಧ್ಯಾಯ ಒಂದರ ಈ ಕೊನೆಯ ಶ್ಲೋಕಗಳು ಅರ್ಜುನನ ವಿಷಾದದ ತೀವ್ರತೆಯನ್ನು ತೋರಿಸುತ್ತವೆ. ಯುದ್ಧದ ಭೀಕರತೆ ಮತ್ತು ಕುಲನಾಶದ ಭೀತಿಯಿಂದ ಅರ್ಜುನನು ಧೃತಿಗೆಟ್ಟು ಶಸ್ತ್ರತ್ಯಾಗ ಮಾಡುವ ಮೂಲಕ ಕೃಷ್ಣನ ಶರಣಾಗತಿಯ ಹಂತಕ್ಕೆ ತಲುಪುತ್ತಾನೆ. ಮುಂದಿನ ಅಧ್ಯಾಯದಲ್ಲಿ ಶ್ರೀಕೃಷ್ಣನ ದಿವ್ಯೋಪದೇಶವು (ಸಾಂಖ್ಯ ಯೋಗ) ಆರಂಭವಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply