ಆಧ್ಯಾತ್ಮಿಕ ಚಿಂತನೆ: ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಎರಡು ಬೃಹತ್ ಸೈನ್ಯಗಳು ಮುಖಾಮುಖಿಯಾಗಿ ನಿಂತಿದ್ದು, ಈ ರೋಮಾಂಚಕಾರಿ ದೃಶ್ಯವನ್ನು ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾನೆ. ಭಗವದ್ಗೀತೆಯ ಮೊದಲ ಅಧ್ಯಾಯದ (ಅರ್ಜುನ ವಿಷಾದ ಯೋಗ) 2 ರಿಂದ 7ನೇ ಶ್ಲೋಕಗಳಲ್ಲಿ, ದುರ್ಯೋಧನನು ತನ್ನ ಗುರು ದ್ರೋಣಾಚಾರ್ಯರ ಬಳಿ ಪಾಂಡವರ ಬಲಿಷ್ಠ ಸೈನ್ಯದ ಬಗ್ಗೆ ಆತಂಕದಿಂದ ಹಾಗೂ ಎಚ್ಚರಿಕೆಯಿಂದ ವಿವರಿಸುವ ಸನ್ನಿವೇಶವಿದೆ. ಅದರ ಸರಳ ಕನ್ನಡ ಅರ್ಥ ಇಲ್ಲಿದೆ:
ಇದನ್ನೂ ಓದಿ: ಮಾರ್ಚ್ 3ಕ್ಕೆ ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ ಗೋಚರಿಸಲಿದೆಯಾ? ಸಮಯದ ಪೂರ್ಣ ವಿವರ ಇಲ್ಲಿದೆ
ಶ್ಲೋಕ 2 & 3: ಪಾಂಡವರ ಬೃಹತ್ ಸೈನ್ಯದ ದರ್ಶನ

ಶ್ಲೋಕ 2
ಸಂಜಯ ಉವಾಚ ।
ದೃಷ್ಟಾತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ।
ಆಚಾರ್ಯಮುಪಸ೦ಗಮ್ಯ ರಾಜಾ ವಚನಮಬ್ರವೀತ್ ||
ಶ್ಲೋಕ 3
ಪಶ್ಯತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್ |
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯಣ ಧೀಮತಾ ||
ಸರಳ ಅರ್ಥ: ಸಂಜಯನು ಧೃತರಾಷ್ಟ್ರನಿಗೆ ಹೇಳುತ್ತಾನೆ- “ಮಹಾರಾಜ, ಯುದ್ಧಕ್ಕೆ ಸಜ್ಜಾಗಿ ನಿಂತಿರುವ ಪಾಂಡವರ ಬೃಹತ್ ಪಡೆಯನ್ನು ನೋಡಿ ದುರ್ಯೋಧನನು ತನ್ನ ಗುರು ದ್ರೋಣಾಚಾರ್ಯರ ಬಳಿ ತೆರಳಿ ಹೀಗೆ ಹೇಳಿದನು: ಓ ಆಚಾರ್ಯರೇ, ಪಾಂಡು ಪುತ್ರರ ಈ ಬೃಹತ್ ಸೈನ್ಯವನ್ನು ಒಮ್ಮೆ ನೋಡಿ, ನಿಮ್ಮದೇ ಜಾಣ ಶಿಷ್ಯನಾದ ದ್ರುಪದನ ಮಗ (ಧೃಷ್ಟದ್ಯುಮ್ನ) ಈ ಪಡೆಯನ್ನು ಎಷ್ಟು ಅಚ್ಚುಕಟ್ಟಾಗಿ ಯುದ್ಧಕ್ಕೆ ಸಜ್ಜುಗೊಳಿಸಿದ್ದಾನೆ!”
ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: 10ನೇ ಗ್ಯಾರಂಟಿಯಾಗಿ ‘ಉಚಿತ ಆರೋಗ್ಯ’ ಘೋಷಿಸಿದ ಡಿಕೆಶಿ!
ಶ್ಲೋಕ 4, 5 & 6: ಪಾಂಡವ ಪಡೆಯ ಮಹಾವೀರರ ಪರಿಚಯ
ಶ್ಲೋಕ 4
ಅತ್ರ ಶೂರಾ ಮಹೇಷ್ಟಾಸಾ ಭೀಮಾರ್ಜುನಸಮಾಯುಧಿ |
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ ||
ಶ್ಲೋಕ 5
ಧೃಷ್ಟಕೇತುಶ್ಚಕಿತಾನಃ ಕಾಶಿರಾಜಶ್ಚ ವೀರ್ಯವಾನ್ |
ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪು೦ಗವಃ ||
ಶ್ಲೋಕ 6
ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ |
ಸೌಭದ್ರೋ ದೌಪದೇಯಾಶ್ಚ ಸರ್ವ ಏವ ಮಹಾರಥಾಃ ||
ಪಾಂಡವರ ಸೈನ್ಯದಲ್ಲಿರುವ ಅತಿರಥ-ಮಹಾರಥರನ್ನು ದುರ್ಯೋಧನನು ತನ್ನ ಗುರುವಿಗೆ ಪಟ್ಟಿ ಮಾಡುತ್ತಾನೆ:
ಸರಳ ಅರ್ಥ: “ಈ ಸೈನ್ಯದಲ್ಲಿರುವ ಪ್ರತಿಯೊಬ್ಬರೂ ಮಹಾವೀರರು. ಬಿಲ್ಲುಗಾರಿಕೆಯಲ್ಲಿ ಹಾಗೂ ಕಾಳಗದಲ್ಲಿ ಇವರು ಭೀಮ ಮತ್ತು ಅರ್ಜುನನಿಗೆ ಸಮಾನರಾದವರು. ಸಾತ್ಯಕಿ, ವಿರಾಟ ರಾಜ ಮತ್ತು ದ್ರುಪದನಂತಹ ಮಹಾರಥರಿದ್ದಾರೆ. ಅಷ್ಟೇ ಅಲ್ಲದೆ, ಧೃಷ್ಟಕೇತು, ಚೇಕಿತಾನ, ಬಲಶಾಲಿ ಕಾಶಿರಾಜ, ಪುರುಜಿತ್, ಕುಂತಿಭೋಜ ಮತ್ತು ಶೈಬ್ಯನಂತಹ ಗಂಡುಗಲಿಗಳಿದ್ದು, ಪರಾಕ್ರಮಿ ಯುಧಾಮನ್ಯು, ಕೆಚ್ಚೆದೆಯ ಉತ್ತಮೌಜ, ಸುಭದ್ರೆಯ ಮಗ (ಅಭಿಮನ್ಯು) ಹಾಗೂ ದ್ರೌಪದಿಯ ಮಕ್ಕಳು ಎಲ್ಲರೂ ನಿಶ್ಚಯವಾಗಿ ಮಹಾರಥರೇ ಆಗಿದ್ದಾರೆ.”
ಇದನ್ನೂ ಓದಿ: Ration Card: ಏಪ್ರಿಲ್ 1 ರಿಂದ ರೇಷನ್ ಕಾರ್ಡ್ ಹೊಸ ರೂಲ್ಸ್ ಜಾರಿ; ಈ 4 ತಪ್ಪು ಮಾಡಿದ್ರೆ ನಿಮ್ಮ ಕಾರ್ಡ್ ರದ್ದು!
ಶ್ಲೋಕ 7: ಕೌರವ ಪಡೆಯ ವೀರರ ಪರಿಚಯಕ್ಕೆ ಮುನ್ನುಡಿ
ಶ್ಲೋಕ 7
ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ ।
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ బ్రదిమి కేe ||
ಪಾಂಡವರ ಸೈನ್ಯದ ಬಲವನ್ನು ವಿವರಿಸಿದ ಬಳಿಕ, ದುರ್ಯೋಧನನು ತನ್ನ ಸೈನ್ಯದ ಬಗ್ಗೆ ಹೇಳಲು ಮುಂದಾಗುತ್ತಾನೆ.
ಸರಳ ಅರ್ಥ: “ಓ ದ್ವಿಜೋತ್ತಮ (ದ್ರೋಣಾಚಾರ್ಯರೇ), ಅವರ ಸೈನ್ಯದ ಬಗ್ಗೆ ಹೇಳಿದ್ದಾಯ್ತು. ಈಗ ನಮ್ಮ ಕಡೆಯಿರುವ ಶ್ರೇಷ್ಠ ವೀರರು ಹಾಗೂ ನನ್ನ ಸೇನೆಯ ನಾಯಕರು ಯಾರ್ಯಾರು ಎಂಬುದನ್ನು ನಿಮ್ಮ ಅರಿವಿಗಾಗಿ (ನೆನಪಿಗಾಗಿ) ಹೆಸರಿಸುತ್ತಿದ್ದೇನೆ, ದಯವಿಟ್ಟು ಕೇಳಿ.”
(ಮುಂದಿನ ಶ್ಲೋಕಗಳಲ್ಲಿ ದುರ್ಯೋಧನನು ಕೌರವ ಪಡೆಯ ವೀರರ ಬಗ್ಗೆ ವಿವರಿಸುತ್ತಾನೆ…)
ತಾತ್ಪರ್ಯ: ಎಷ್ಟೇ ದೊಡ್ಡ ಸೈನ್ಯವಿದ್ದರೂ, ಅಧರ್ಮದ ಹಾದಿಯಲ್ಲಿರುವ ದುರ್ಯೋಧನನ ಮನಸ್ಸಿನಲ್ಲಿ ಪಾಂಡವರ ಪಡೆಯನ್ನು ಕಂಡು ಅಳುಕು ಹಾಗೂ ಆತಂಕ ಶುರುವಾಗಿತ್ತು ಎಂಬುದನ್ನು ಈ ಶ್ಲೋಕಗಳು ಸ್ಪಷ್ಟವಾಗಿ ತೋರಿಸುತ್ತವೆ.




