ಮುಂಬೈ : ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ನಾಲ್ವರು ಮೇಲ್ಜಾತಿಯ ಜಾತಿಯ ಪುರುಷರು ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲ್ಲಲು ಪ್ರಯತ್ನಿಸಿದ್ದರು. ಇದನ್ನು ಖಂಡಿಸಿ ಪಶ್ಸಿಮಾ ಬಂಗಾಳದ ತೃಣ ಮೂಲ ಕಾಂಗ್ರೆಸ್ ಸಂಸದೆ, ನಟಿ ನುಸ್ರತ್ ಜಹಾನ್ ಸೇರಿದಂತೆ ಅನೇಕರು ತೀವ್ರವಾಗಿ ಖಂಡಿಸಿದ್ದರು.
ಇನ್ನು ಹತ್ರಾಸ್ನಲ್ಲಿ 19 ವರ್ಷದ ದಲಿತ ನಡೆದಿರುವ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿರುವ ಭಾರತದ ಶ್ರೀಮಂತ ವ್ಯಕಿಗಳಲ್ಲಿ ಒಬ್ಬರಾದ ಮಹೇಂದ್ರ ಗ್ರೂಪ್ ಚೇರ್ಮನ್, ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದು, “ಅತ್ಯಾಚಾರವು ನಮ್ಮ ಮಧ್ಯೆಯಲ್ಲಿರುವ ಹೆಚ್ಚು ಅಪಾಯಕಾರಿ ವೈರಸ್. ಇದು ಇತರ ಕಾಯಿಲೆಗಳಿಗಿಂತ ಹೆಚ್ಚು ಹಾನಿಕಾರಕವೆಂದು ಸಾಬೀತಾಗಿದೆ.
ಆಡಳಿತದಿಂದ ನಮಗೆ ತ್ವರಿತ ನ್ಯಾಯ ಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ನೊಂದವರ ಕುಟುಂಬಕ್ಕೆ ಹಣಕಾಸಿನ ನೆರವು ಅಗತ್ಯವಿದ್ದರೆ ನಾನು ನೀಡುತ್ತೇನೆ ಎಂದು ನ್ಯಾಯಕ್ಕಾಗಿ ಆಗ್ರಹಿಸಿ ಆನಂದ್ ಮಹೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ದಲಿತ ಯುವತಿಯ ಹತ್ಯಾಚಾರ ಪ್ರಕರಣ; ಯುಪಿ ಸರ್ಕಾರ ವಿರುದ್ಧ ಕಿಡಿಕಾರಿದ ಸಂಸದೆ, ಖ್ಯಾತ ನಟಿ…!
Rape is the more dangerous virus in our midst. It’s proven to be more pernicious than any other disease. We need swift justice to be administered. The maximum penalty…If her family needs financial support & if a local NGO crowdsources an appeal, I will pledge a contribution. https://t.co/hxDbiEV4PB
— anand mahindra (@anandmahindra) September 29, 2020