ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಿಜೆಪಿ ಯುವಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಮಹತ್ವದ ಮಾಹಿತಿ ಹೊರಬಿದ್ದಿದೆ.
ಹೌದು, ಪ್ರವೀಣ್ ಹತ್ಯೆಗೂ ಮುನ್ನ ಆರೋಪಿಗಳು ಕೋಳಿ ಅಂಗಡಿ ಇದ್ದ ಪ್ರದೇಶದಲ್ಲಿ ಬೀದಿ ದೀಪಗಳನ್ನು ಆರಿಸಿದ್ದು, ತರುವಾಯ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಗೈದು ಪರಾರಿಯಾದರು ಎನ್ನಲಾಗಿದೆ.
ಇನ್ನು ಮೃತ ಪ್ರವೀಣ್ ನೆಟ್ಟಾರು ಚಲನವಲನಗಳ ಬಗ್ಗೆ ಆರೋಪಿ ಶಫೀಕ್ ಮನೆಯಲ್ಲಿ ಇದ್ದುಕೊಂಡೇ ಗಮನಿಸುತ್ತಿದ್ದ ಎನ್ನಲಾಗಿದ್ದು, ಇವರ ಮೆನೆಯಲ್ಲಿಯೇ ಪ್ರವೀಣ್ ಹತ್ಯೆಗೆ ಆರೋಪಿಗಳು ಸ್ಕೆಚ್ ಹಾಕಿದ್ದರು ಎಂದೂ ಹೇಳಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.