ಕರೋನ ಸಂಜಿವೀನಿಗೆ ಸಕಲ ಸಿದ್ಧತೆ; ಇಂದು ದೇಶದಾತ್ಯಂತ ಲಸಿಕೆ ನೀಡಿಕೆ ಆರಂಭ

corona vaccine vijayaprabha corona vaccine vijayaprabha

ಬೆಂಗಳೂರು : ಇಂದು ಪ್ರಧಾನಿ ನರೇಂದ್ರ ಮೋದಿಯವರು ಕರೋನ ಲಸಿಕೆ ಹಂಚಿಕೆಗೆ ವರ್ಚ್ಯುವಲ್ ವೇದಿಕೆ ಮೂಲಕ ಚಾಲನೆ ನೀಡುತ್ತಿದ್ದಂತೆ, ಇತ್ತ ರಾಜ್ಯದ ಕೂಡ 243 ಕಡೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕರೋನ ಲಸಿಕೆಯ ಡೋಸ್ ಗಳು ತಲುಪಿದ್ದು, ಕರೋನ ಸೋಂಕಿನ ವಿರುದ್ಧ ಲಸಿಕೆ ಮಹಾಸಮರಕ್ಕೆ ಕರುನಾಡು ಸಜ್ಜಾಗಿದೆ.

ರಾಜ್ಯದಲ್ಲಿ ಕರೋನ ಸೋಂಕು ರಣಕೇಕೆ ಹಾಕಿತ್ತು. ಈ ಹೆಮ್ಮಾರಿಯ ಅಟ್ಟಹಾಸಕ್ಕೆ ಇಡೀ ರಾಜ್ಯವೇ ಸ್ತಬ್ದವಾಗಿತ್ತು. ಆದರೆ ಈಗ ಕರೋನ ಮಹಾಮಾರಿ ಒಡೆದೋಡಿಸೋ ಬಂದಿದ್ದು, ಬೆಂಗಳೂರಿನ 8 ಕಡೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳು ಸೇರಿದಂತೆ 243 ಕಡೆ ಕರೋನ ಲಸಿಕೆ ನೀಡಲಾಗುತ್ತದೆ. ಇದರಲ್ಲಿ 237 ಕಡೆ ಕೋವಿಶಿಲ್ಡ್ ಮತ್ತು 6 ಕಡೆ ಕಾವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತದೆ.

ಬಳ್ಳಾರಿ 21160 ಹಾಗು ದಾವಣಗೆರೆ 21810 ಸೇರಿದಂತೆ ರಾಜ್ಯದಲ್ಲಿ 647500 ಡೋಸ್ ವಿತರಣೆ:

Advertisement

ರಾಜ್ಯದಲ್ಲಿ ಬಳ್ಳಾರಿ 21160 ಹಾಗು ದಾವಣಗೆರೆ 21810 ಸೇರಿದಂತೆ ರಾಜ್ಯದ ಎಲ್ಲಾ ಕಡೆ ಒಟ್ಟು 647500 ಡೋಸ್ ಗಳನ್ನು ವಿತರಣೆ ಮಾಡಲಾಗಿದ್ದು, ರಾಜ್ಯದಲ್ಲಿ ಒಟ್ಟು 7 ಲಕ್ಷದ 17 ಸಾವಿರದ 439 ಅರೋಗ್ಯ ಸಿಬ್ಬಂದಿಗೆ ಕರೋನ ಲಸಿಕೆ ನೀಡಲಾಗುತ್ತದೆ. ಇನ್ನು ಇಂದು ಒಂದೇ ದಿನ ರಾಜ್ಯದಲ್ಲಿ 24 ಸಾವಿರದ 300 ಕರೋನ ವಾರಿಯರ್ಸ್ ಗೆ ಕರೋನ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಅರೋಗ್ಯ ಸಚಿವ ಕೆ ಸುಧಾಕರ್ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement