ಬೆಂಗಳೂರು : ರಾಜ್ಯದಲ್ಲಿಂದು 41,400 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 52 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
ಒಂದೇ ದಿನದಲ್ಲಿ 53,093 ಜನರು ಡಿಸ್ಚಾರ್ಜ್ ಆಗಿದ್ದು, 3ನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದು ದಿನದಲ್ಲಿ ಪತ್ತೆಯಾದ ಸೋಂಕಿನ ಪ್ರಕರಣಗಳ ಸಂಖ್ಯೆಗಿಂತ ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದು,ರಾಜ್ಯದಲ್ಲಿ ಪಾಸಿಟಿವಿಟಿ ದರ 26.70% ಇದ್ದು, 3,50,742 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.
41,400 ಕೇಸ್: ಯಾವ ಜಿಲ್ಲೆಯಲ್ಲಿ, ಎಷ್ಟು?
ಬಾಗಲಕೋಟೆ-402, ಬಳ್ಳಾರಿ-775, ಬೆಳಗಾವಿ-977, ಬೆಂ. ಗ್ರಾ.-958, ಬೆಂ.ನಗರ-19105, ಬೀದರ್-403, ಚಾಮರಾಜನಗರ-589, ಚಿಕ್ಕಬಳ್ಳಾಪುರ-915, ಚಿಕ್ಕಮಗಳೂರು-244, ಚಿತ್ರದುರ್ಗ-649, ದ. ಕನ್ನಡ-667, ದಾವಣಗೆರೆ-403, ಕೊಡಗು-389, ಕೋಲಾರ-2185, ಕೊಪ್ಪಳ-310, ಮಂಡ್ಯ-1495, ಮೈಸೂರು-1494, ರಾಯಚೂರು-214, ರಾಮನಗರ-242, ಶಿವಮೊಗ್ಗ-494, ತುಮಕೂರು-2026, ಉಡುಪಿ-1202, ಉ. ಕನ್ನಡ-1007, ವಿಜಯಪುರ-333, ಯಾದಗಿರಿ-125.ಧಾರವಾಡ-1511, ಗದಗ-168, ಹಾಸನ-1381, ಹಾವೇರಿ-164, ಕಲಬುರಗಿ-573.