ಪಿಎಂ ಕಿಸಾನ್ ಸನ್ಮಾನ್ ಯೋಜನೆಯ ಫಲಾನುಭವಿ ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರ 12ನೇ ಕಂತಿನ 2000 ರೂಪಾಯಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ರೈತರ ಖಾತೆಗೆ ವರ್ಗಾಯಿಸುವ ಸಾಧ್ಯತೆ ಇದೆ.
ಅಷ್ಟೇ ಅಲ್ಲ, ಯಾರಿಗೆ ಇನ್ನೂ ಪಿಎಂ ಕಿಸಾನ್ ಸನ್ಮಾನ್ ಯೋಜನೆಯ 11ನೇ ಕಂತಿನ ಹಣ ಪಾವತಿಯಾಗದೇ ಇರುವ ರೈತರ ಖಾತೆಗೆ ಈ ಬಾರಿ ಒಟ್ಟಿಗೆ 4,000ರೂಪಾಯಿಗಳು ಪಾವತಿಯಾಗಲಿದ್ದು, ಅದಕ್ಕೂ ಮೊದಲು ಈವರೆಗೂ e-KYCಯನ್ನು ಮಾಡಿಲ್ಲದ ರೈತ ಫಲಾನುಭವಿಗಳು pmkisan.gov.inಗೆ ಭೇಟಿ ನೀಡಿ, ಆಗಸ್ಟ್ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಒಂದು ವೇಳೆ, ಆಗಸ್ಟ್ 31ರೊಳಗೆ ಫಲಾನುಭವಿ ರೈತರು e-KYC ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಅಂತಹ ರೈತರ ಖಾತೆಗೆ 4,000ರೂಪಾಯಿಗಳು ಜಮೆ ಆಗುವುದು ಅನುಮಾನ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.