ಬೆಂಗಳೂರು: ಕೊರೋನಾ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚುತ್ತಿರುವ ನಡುವೆಯೂ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ, ಬೆಂಗಳೂರು ನಗರವೊಂದರಲ್ಲಿಯೇ ಇಂದು 10,000ಕ್ಕೂ ಹೆಚ್ಚು ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು 3,203 ಪ್ರಕರಣಗಳು ಪತ್ತೆಯಾಗಿದ್ದು, 14,302 ಜನ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 94 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇಂದೇ 3203 ಸೋಂಕು: ಯಾವ ಜಿಲ್ಲೆಯಲ್ಲಿ ಎಷ್ಟು?:
ಬಾಗಲಕೋಟೆ-4, ಬಳ್ಳಾರಿ-34, ಬೆಳಗಾವಿ-114, ಬೆಂ.ಗ್ರಾ-75, ಬೆಂಗಳೂರು-676, ಬೀದರ್-3, ಚಾಮರಾಜನಗರ-75, ಚಿಕ್ಕಬಳ್ಳಾಪುರ-40, ಚಿಕ್ಕಮಗಳೂರು-98, ಚಿತ್ರದುರ್ಗ-41, ದ.ಕನ್ನಡ-285, ದಾವಣಗೆರೆ-66, ಧಾರವಾಡ-27, ಗದಗ-15, ಹಾಸನ-281, ಹಾವೇರಿ-18, ಕಲಬುರಗಿ-21, ಕೊಡಗು-167, ಕೋಲಾರ-96, ಕೊಪ್ಪಳ-16, ಮಂಡ್ಯ-97, ಮೈಸೂರು-366, ರಾಯಚೂರು-6, ರಾಮನಗರ-9, ಶಿವಮೊಗ್ಗ-194, ತುಮಕೂರು-157, ಉಡುಪಿ-146, ಉ.ಕನ್ನಡ-59, ವಿಜಯಪುರ-11, ಯಾದಗಿರಿ-6 ಪ್ರಕರಣಗಳು ಪತ್ತೆಯಾಗಿವೆ.