ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ; ಇಂದು 28,264 ಕೊರೋನಾ ಕೇಸ್; 68 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, ಇಂದು 28,264 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 68 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ 29,244…

coronavirus-update

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, ಇಂದು 28,264 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 68 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ 29,244 ಜನರು ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 16.38% ಪಾಸಿಟಿವಿಟಿ ದರವಿದ್ದು, ರಾಜ್ಯಾದ್ಯಂತ 2,51,084 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ದೈನಂದಿನ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಿನ್ನೆ 33,337 ಕೇಸ್ ಪತ್ತೆಯಾಗಿದ್ದವು.

28,264 ಕೇಸ್: ಯಾವ ಜಿಲ್ಲೆಯಲ್ಲಿ, ಎಷ್ಟು?:

Vijayaprabha Mobile App free

ಬಾಗಲಕೋಟೆ-338, ಬಳ್ಳಾರಿ-964, ಬೆಳಗಾವಿ-619, ಬೆಂ. ಗ್ರಾ.-453, ಬೆಂ.ನಗರ-11938, ಬೀದರ್-111, ಚಾಮರಾಜನಗರ-554, ಚಿಕ್ಕಬಳ್ಳಾಪುರ-334, ಚಿಕ್ಕಮಗಳೂರು-201, ಚಿತ್ರದುರ್ಗ-360, ದ. ಕನ್ನಡ-419, ದಾವಣಗೆರೆ-239, ಧಾರವಾಡ-1356, ಗದಗ-146, ಹಾಸನ-859, ಹಾವೇರಿ-409, ಕಲಬುರಗಿ-564, ಕೊಡಗು-633, ಕೋಲಾರ-422, ಕೊಪ್ಪಳ-321, ಮಂಡ್ಯ-953, ಮೈಸೂರು-2322, ರಾಯಚೂರು-306, ರಾಮನಗರ-246, ಶಿವಮೊಗ್ಗ-530, ತುಮಕೂರು-1165, ಉಡುಪಿ-441, ಉ. ಕನ್ನಡ-780, ವಿಜಯಪುರ-159, ಯಾದಗಿರಿ-122.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.