ನವದೆಹಲಿ: ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಒಳ್ಳೆಯ ಸುದ್ದಿ. ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ವರ್ಷಾಚರಣೆಯಂದ ಹಾಗು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25 ರಂದು ಈ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು. ಪ್ರಧಾನಿ ಮೋದಿ ಅವರು ಇತ್ತೀಚೆಗೆ ಮಧ್ಯಪ್ರದೇಶದ ರೈತರೊಂದಿಗೆ ಮಾತನಾಡುವ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಮೋದಿ ಸರ್ಕಾರ ದೇಶದ ರೈತ ಕುಟುಂಬಗಳ ಖಾತೆಗಳಿಗೆ ವಾರ್ಷಿಕವಾಗಿ 6,000 ರೂ. ನಿಗದಿಪಡಿಸಿದ್ದು, ಈ ಮೊತ್ತವನ್ನು ಮೂರು ಕಂತುಗಳಲ್ಲಿ 2000 ರೂ. ದರದಲ್ಲಿ ಏಪ್ರಿಲ್, ಆಗಸ್ಟ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ರೈತರ ಖಾತೆಗಳಲ್ಲಿ ಜಮಾ ಮಾಡಲಾಗುತ್ತದೆ.
ಎಫ್ಟಿಒ ಜನರೇಟ್ ಆಗಿದೆ, ಪೇಮೆಂಟ್ ಕಂಫಾರ್ಮೇಷನ್ ಪೆಂಡಿಂಗ್ ನಲ್ಲಿದೆ ಎಂದು ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಸ್ಟೇಟಸ್ ತೋರಿಸುತ್ತದೆ. ಎಫ್ಟಿಒ ಎಂದರೆ ಫಂಡ್ ಟ್ರಾನ್ಸ್ಫರ್ ಆರ್ಡರ್. ಅಂದರೆ ರೈತರಿಗೆ ಹಣವನ್ನು ಕಳುಹಿಸಲು ನೀಡಿರುವ ವಿವರಗಳಿಗೆ ಕೇಂದ್ರವು ಸರಿ ಎಂದು ಹೇಳಿದೆ. ಅದರ ಹಣವನ್ನು ಶೀಘ್ರದಲ್ಲೇ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದರ್ಥ.
PM ಕಿಸಾನ್ ಸ್ಥಿತಿಯನ್ನು ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
https://pmkisan.gov.in/BeneficiaryStatus.aspx