ಅಮೃತ ಸ್ವಾಭಿಮಾನಿ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಈ ಯೋಜನೆಗೆ 354.50 ಕೋಟಿ ರೂ ಮೀಸಲಿರಿಸಿದ್ದು, ಒಬ್ಬ ಕುರಿಗಾಹಿಗೆ 20 ಕುರಿ, ಒಂದು ಮೇಕೆ ನೀಡಲಾಗುತ್ತದೆ.
ಇನ್ನು, ಅಮೃತ ಸ್ವಾಭಿಮಾನಿ ಯೋಜನೆಯಡಿ ಘಟಕವೊಂದಕ್ಕೆ 1.75 ಲಕ್ಷ ರೂ ನೆರವು ನೀಡಲಾಗುತ್ತದೆ. ಇಂತಹ 20,000 ಘಟಕಗಳನ್ನು ತೆರೆಯಲಾಗುವುದು. ನೆರವಿನಲ್ಲಿ 50% ಕೇಂದ್ರ ಸರ್ಕಾರದ್ದಾಗಿದ್ದು, 25% ರಾಜ್ಯ ಸರ್ಕಾರ ಭರಿಸಲಿದೆ. ಶೇ.25ರಷ್ಟನ್ನು ಫಲಾನುಭವಿಗಳೇ ಹಾಕಿಕೊಳ್ಳಬೇಕಿದೆ. ಇದಕ್ಕೆ ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳ ಸದಸ್ಯರು ಅರ್ಹರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.