ಕೊಪ್ಪ, ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಯಲ್ಲಿ ಉದ್ಯೋಗಾವಕಾಶ: 10th, PUC ಪಾಸ್ ಆದವರು ಅರ್ಜಿ ಸಲ್ಲಿಸಿ

(anganwadi-:) ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ?:
ಅಂಗನವಾಡಿ ಕಾರ್ಯಕರ್ತೆ
ಅಂಗನವಾಡಿ ಸಹಾಯಕಿ

ಕೊಪ್ಪ ತಾಲೂಕಿನ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಯ ವಿವರ:
ಕಾರ್ಯಕರ್ತೆ ಹುದ್ದೆ:
* ಹೊಸೂರು, (ಭಂಡಿಗಡಿ)
* ಹೊನಗಾರು (ಚಾವಲ್ಮನೆ)
* ಬೊಮ್ಲಾಪುರ (ಹಿರೇಕೊಡಿಗೆ)
* ದೋರ್ಗಲ್(ಮಿನಿ) (ಹಿರೇಕೊಡಿಗೆ)
* ಕೋಡೂರು (ಶಾನುವಳ್ಳಿ)

Advertisement

ಸಹಾಯಕಿ ಹುದ್ದೆ
* ಮೇಲಿನ ಪೇಟೆ (ಕೊಪ್ಪ)
* ಅರೆಹಳ್ಳ (ಅಗಳಗಂಡಿ)
* ಅಬ್ಬಿಗದ್ದೆ (ಬಿಂತ್ರವಳ್ಳಿ)
* ಶಿರಕರಡಿ (ಚಾವಲ್ಮನೆ)
* ರಾಘವೇಂದ್ರನಗರ (ಹಾರಂದೂರು, ಕೊಪ್ಪ)
* ಗೋರಿರಸ್ತೆ (ಹಾರಂದೂರು, ಕೊಪ್ಪ)
* ಕೂಲುರ್ (ಜಯಪುರ)
* ಜಯಪುರ (ಜಯಪುರ)
* ಗುಬ್ಬಿಬೈಲು (ಜಯಪುರ)
* ಕೌರಿಗುಡ್ಡ (ಕೊಪ್ಪ)

ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಖಾಲಿ ಇರುವ ಸಹಾಯಕಿ ಹುದ್ದೆಯ ವಿವರ: (ಖಾಲಿ ಇರುವ ಹುದ್ದೆಯ ಸ್ಥಳ ಅಂಗನವಾಡಿ ಕೇಂದ್ರದ ಹೆಸರು, ಕಂದಾಯ ಗ್ರಾಮ/ಕಂದಾಯ ವಾರ್ಡ್ ಹೆಸರು, ಗ್ರಾಮ ಪಂಚಾಯಿತಿ/ ಪಟ್ಟಣ ಪಂಚಾಯಿತಿ/ ಪುರಸಭೆ/ ನಗರಸಭೆ ಈ ಪ್ರಕಾರದಲ್ಲಿ ನೀಡಲಾಗಿದೆ. )

ಕಾರ್ಯಕರ್ತೆ ಹುದ್ದೆ:
* ಮಾಗಲು ಹೊಸಕೊಪ್ಪ (ಕೋಗೋಡು,ಮರ್ಕಲ್)- ಇತರೆ
* ಕಿಗ್ಗಾ (ಯಡದಳ್ಳಿ, ಮರ್ಕಲ್)- ಇತರೆ
* ಕಿತ್ಲೇಬೈಲ್ (ಹೊನ್ನವಳ್ಳಿ, ಧರೆಕೊಪ್ಪ)- ಇತರೆ
* ಮುಡುಬ (ಮುಡುಬ, ಕೆರೆ)- ಪರಿಶಿಷ್ಟ ಜಾತಿ
* ನೆಮ್ಮಾರ್ (ನೆಮ್ಮಾರ್, ನೆಮ್ಮಾರ್)- ಇತರೆ

ಸಹಾಯಕಿ ಹುದ್ದೆ:
* ಬೇಗಾರು ಕೈಮರ (ಬೇಗಾರು, ಬೇಗಾರು)- ಇತರೆ
* ಹೆಗ್ಗದ್ದೆ (ಕಾವಡಿ, ಅಡ್ಡಗದ್ದೆ)- ಇತರೆ
* ನೆಮ್ಮಾರು (ನೆಮ್ಮಾರು, ನೆಮ್ಮಾರು)- ಇತರೆ
* ಶಿಡ್ಲೆ (ವೈಕುಂಠಪುರ, ಕೂತಗೋಡು)- ಇತರೆ
* ಮೇಲು ನೆಮ್ಮಾರು (ನೆಮ್ಮಾರು, ನೆಮ್ಮಾರು)- ಪರಿಶಿಷ್ಟ ಜಾತಿ
* ನೆಮ್ಮಾರು ಎಸ್ಟೇಟ್ (ನೆಮ್ಮಾರು ಎಸ್ಟೇಟ್, ನೆಮ್ಮಾರು)- ಪರಿಶಿಷ್ಟ ಪಂಗಡ
* ಹೊಸನಗರ (ಕುಂತೂರು, ಮೆಣಸೆ)- ಇತರೆ
* ಹೊಳೆಕೊಪ್ಪ (ಧರೆಕೊಪ್ಪ, ಧರೆಕೊಪ್ಪ) ಇತರೆ
* ಕೆಳಕೊಪ್ಪ (ಕಿಕ್ರೆ, ಮೆಣಸೆ) ಇತರೆ
* ಬಿದರಗೋಡು (ಬೇಗಾರು, ಬೇಗಾರು) ಇತರೆ
* ವಿದ್ಯಾನಗರ (ಶೃಂಗೇರಿ ಗ್ರಾಮಾಂತರ, ವಿದ್ಯಾರಣ್ಯಪುರ)- ಇತರೆ
* ಮೀಗಾ (ಮೀಗಾ, ಬೇಗಾರು(- ಇತರೆ
* ಯಡದಾಳು (ಯಡದಾಳು, ಮರ್ಕಲ್)- ಇತರೆ
* ಶೀರ್ಲು (ಶೀರ್ಲು, ಕೆರೆ)- ಪರಿಶಿಷ್ಟ ಪಂಗಡ
* ಮೇಲುಕೊಪ್ಪ (ಮೇಲುಕೊಪ್ಪ, ಧರೆಕೊಪ್ಪ)- ಇತರೆ

ವಿದ್ಯಾರ್ಹತೆ?;
* ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿಸಲ್ಲಿಸಲು ಕಡ್ಡಾಯವಾಗಿ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು.
* ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಈ ವಯಸ್ಸಿನ ಅರ್ಹತೆಗಳು ಅನ್ವಯವಾಗಲಿವೆ.
ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳಿದ್ದು, ಈ ನಿಯಮಕ್ಕನುಗುಣವಾಗಿ ಅರ್ಹತೆ ಇರುವವರು ಅರ್ಜಿ ಸಲ್ಲಿಸಿ.

ವೇತನ:
10,000-15,000

ಅರ್ಜಿ ಹಾಕಲು ಬೇಕಾಗುವ ದಾಖಲೆಗಳು
* ಪೋಟೋ, ಸಹಿ, e-mail
* ಆಧಾರ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ವಾಸಸ್ಥಳ ದೃಢೀಕರಣ ಪತ್ರ
* ಎಸ್.ಎಸ್.ಎಲ್.ಸಿ ಅಂಕಪಟ್ಟಿ (ಹೆಲ್ಪರ್ ಹುದ್ದೆಗೆ)
* ಪಿಯುಸಿ ಅಂಕಪಟ್ಟಿ (ಟೀಚರ್ ಹುದ್ದೆಗೆ)

(anganwadi-:) ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. https://karnemakaone.kar.nic.in/abcd/home.aspx

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:
19-09-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
12-10-2024

(anganwadi-:) ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾ ಕಚೇರಿ ಶೃಂಗೇರಿ ಅವರನ್ನು ಸಂಪರ್ಕಿಸಬಹುದಾಗಿದೆ.
08265-250342

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement