ಕರ್ನಾಟಕದ ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಅ.8 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾದಾಮಿ, ಬೆಳಗಾವಿ, ಬೆಂಗಳೂರು ನಗರ, ಬೀದರ್, ಚಿತ್ರದುರ್ಗ, ಧಾರವಾಡ, ಗದಗ, ಗೋಕರ್ಣ, ಹಾಸನ, ಕಲಬುರ್ಗಿ, ಕಾರವಾರ, ಮಂಗಳೂರು, ಮೈಸೂರು, ರಾಯಚೂರು, ವಿಜಯಪುರ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಮೈಸೂರು, ಶಿವಮೊಗ್ಗ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಉಳಿದ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
ಪ್ರಮುಖ ನಗರಗಳ ತಾಪಮಾನ
ಬೆಂಗಳೂರು: 28-19, ಮಂಗಳೂರು: 29-25, ಶಿವಮೊಗ್ಗ: 31-21, ಬೆಳಗಾವಿ: 30-20, ಮೈಸೂರು: 30-20, ಮಂಡ್ಯ: 31-21, ಚಿತ್ರದುರ್ಗ: 30-21, ಹಾವೇರಿ: 31-21, ಬಳ್ಳಾರಿ: 32-23, ಗದಗ: 31-21, ಕೊಪ್ಪಳ: 31-22, ರಾಯಚೂರು: 32-23, ಯಾದಗಿರಿ: 32-23, ವಿಜಯಪುರ: 32-22, ಬೀದರ್: 29-22, ಕಲಬುರಗಿ: 32-23, ಬಾಗಲಕೋಟೆ: 32-22 ಡಿಗ್ರಿ ಸೆಲ್ಸಿಯಸ್ ಇರಲಿದೆ