ಪಂಚಾಂಗ ವಿವರ: ಮಾರ್ಚ್ 01, 2026
ಇಂದಿನ ಪಂಚಾಂಗದ ಮಾಹಿತಿ ಇಲ್ಲಿದೆ:
- ಸೂರ್ಯೋದಯ: 6:38 ಬೆಳಿಗ್ಗೆ | ಸೂರ್ಯಾಸ್ತ: 6:19 ಸಂಜೆ
- ಸಂವತ್ಸರ: ವಿಶ್ವಾವಸು ನಾಮ ಸಂವತ್ಸರ, ಶಾಲಿವಾಹನ ಶಕೆ 1947
- ಪಕ್ಷ/ಮಾಸ: ಪಾಲ್ಗುಣ ಮಾಸ, ಶುಕ್ಲ ಪಕ್ಷ
- ತಿಥಿ: ತ್ರಯೋದಶಿ (ರಾತ್ರಿ 7:12 ರವರೆಗೆ), ನಂತರ ಚತುರ್ದಶಿ
- ನಕ್ಷತ್ರ: ಪುಷ್ಯ (ಬೆಳಿಗ್ಗೆ 8:32 ರವರೆಗೆ), ನಂತರ ಆಶ್ಲೇಷ
- ಶುಭ ಮುಹೂರ್ತ: ಬ್ರಹ್ಮ ಮುಹೂರ್ತ (5:02 – 5:50 ಬೆ.), ಅಮೃತ ಕಾಲ (6:17 – 7:50 ಬೆ.), ಅಭಿಜಿತ್ ಮುಹೂರ್ತ (12:05 – 12:51 ಮ.)
- ಅಶುಭ ಸಮಯ (ರಾಹು ಕಾಲ): ಸಂಜೆ 04:30 ರಿಂದ 06:00 ರವರೆಗೆ.
ದ್ವಾದಶ ರಾಶಿಗಳ ಫಲಫಲಗಳು

ಮೇಷ ರಾಶಿ: ಕಣ್ಣಿನ ಸಮಸ್ಯೆ ಕಾಡಬಹುದು, ಎಚ್ಚರಿಕೆ ಇರಲಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಉತ್ತಮ ಲಾಭದ ಯೋಗವಿದೆ. ಕೌಟುಂಬಿಕ ಅಶಾಂತಿ ಸಾಧ್ಯತೆ ಇರುವುದರಿಂದ ತಾಳ್ಮೆಯಿಂದಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಯಶಸ್ಸು ಸಿಗಲಿದೆ.
ವೃಷಭ ರಾಶಿ: ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಪತ್ನಿಗೆ ಅನಿರೀಕ್ಷಿತ ಧನ ಲಾಭವಾಗುವ ಸಾಧ್ಯತೆ ಇದೆ. ಹೊಟ್ಟೆಗೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳಬಹುದು, ಆಹಾರ ಕ್ರಮದ ಬಗ್ಗೆ ಜಾಗ್ರತೆ ಇರಲಿ. ರಾಜಕಾರಣಿಗಳಿಗೆ ಸಮಾಜದಲ್ಲಿ ಗೌರವ ಹೆಚ್ಚಲಿದೆ.
ಮಿಥುನ ರಾಶಿ: ಭೂಮಿ ವ್ಯವಹಾರ ಮಾಡುವವರಿಗೆ ಪ್ರಗತಿ ಕಂಡುಬರಲಿದೆ. ಕೆಲಸದ ಸ್ಥಳದಲ್ಲಿ ಶತ್ರುಗಳ ಅಡ್ಡಿ ಉಂಟಾಗಬಹುದು. ಕೋಪದ ಮೇಲೆ ನಿಯಂತ್ರಣವಿರಲಿ. ಹಣ್ಣು ಮತ್ತು ಹೂವು ಬೆಳೆಗಾರರಿಗೆ ಆದಾಯ ದ್ವಿಗುಣವಾಗಲಿದೆ.
ಕರ್ಕಾಟಕ ರಾಶಿ: ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು ಕಷ್ಟವಾಗಬಹುದು. ಆದರೆ ರಿಯಲ್ ಎಸ್ಟೇಟ್ ಮತ್ತು ಸಾರಿಗೆ ವ್ಯವಹಾರದಲ್ಲಿ ಆದಾಯ ಹೆಚ್ಚಲಿದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ, ಮಾತು ಹಿತವಾಗಿರಲಿ.
ಸಿಂಹ ರಾಶಿ: ಉದ್ಯೋಗ ಹುಡುಕುತ್ತಿರುವವರಿಗೆ ಶುಭ ವಾರ್ತೆ ಸಿಗಲಿದೆ. ಮಧ್ಯಾಹ್ನದ ನಂತರ ಆಕಸ್ಮಿಕ ಧನ ಪ್ರಾಪ್ತಿಯಾಗುವ ಯೋಗವಿದೆ. ವಾಹನ ಚಾಲನೆ ಮಾಡುವಾಗ ಅತಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಲೇಖಕರಿಗೆ ಗೌರವ ಸನ್ಮಾನ ದೊರೆಯಲಿದೆ.
ಕನ್ಯಾ ರಾಶಿ: ಹೊಸ ವ್ಯಾಪಾರ ಆರಂಭಿಸಲು ಅಡೆತಡೆಗಳು ಎದುರಾಗಬಹುದು. ಹಣಕಾಸಿನ ವಿಚಾರದಲ್ಲಿ ಒತ್ತಡವಿರುತ್ತದೆ. ಸಮಾಜ ಸೇವೆಯಲ್ಲಿ ತೊಡಗಿದವರಿಗೆ ಕೀರ್ತಿ ಲಭಿಸಲಿದೆ. ಸಂಬಂಧಗಳಲ್ಲಿ ಮದುವೆ ಮಾತುಕತೆ ಯಶಸ್ವಿಯಾಗಬಹುದು.
ತುಲಾ ರಾಶಿ: ಜೀವನದಲ್ಲಿ ಮಹತ್ವದ ಬದಲಾವಣೆ ಕಂಡುಬರಲಿದೆ. ಈ ಹಿಂದೆ ಅನುಭವಿಸಿದ ಅವಮಾನಗಳಿಗೆ ಈಗ ಗೌರವದ ರೂಪದಲ್ಲಿ ಉತ್ತರ ಸಿಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಪ್ರೇಮಿಗಳಿಗೆ ಪ್ರವಾಸಕ್ಕೆ ಉತ್ತಮ ದಿನ.
ವೃಶ್ಚಿಕ ರಾಶಿ: ಪತ್ನಿಯ ಸಹಕಾರದಿಂದ ನಿಮ್ಮ ಅಭಿವೃದ್ಧಿ ಸಾಧ್ಯವಾಗಲಿದೆ. ಕಾನೂನು ಹೋರಾಟ ನಡೆಸುತ್ತಿರುವವರಿಗೆ ಭೂಮಿ ಮರಳಿ ಪಡೆಯುವ ಯೋಗವಿದೆ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಬಂಧುಗಳಿಂದ ಧನಸಹಾಯ ಲಭ್ಯ.
ಧನು ರಾಶಿ: ಕಬ್ಬಿಣ ಮತ್ತು ಲೋಹದ ವ್ಯಾಪಾರ ಮಾಡುವವರಿಗೆ ಅಭಿವೃದ್ಧಿ ಇದೆ. ಹೊಸ ಜೀವನ ಸಂಗಾತಿಯ ಹುಡುಕಾಟದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಲಾಭದ ನಿರೀಕ್ಷೆ ಮಾಡಬಹುದು. ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಸಿಗಲಿದೆ.
ಮಕರ ರಾಶಿ: ಅಧ್ಯಾತ್ಮದ ಕಡೆಗೆ ಮನಸ್ಸು ಹರಿಯಲಿದೆ. ಬಟ್ಟೆ ವ್ಯಾಪಾರಿಗಳಿಗೆ ಆರ್ಥಿಕ ಚೇತರಿಕೆ ಕಂಡುಬರಲಿದೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಡಿ, ಇದರಿಂದ ಸಾಲದ ಸಮಸ್ಯೆ ಎದುರಾಗಬಹುದು.
ಕುಂಭ ರಾಶಿ: ಕಾರ್ಯಸಿದ್ಧಿಯಾಗುವ ಉತ್ತಮ ದಿನವಿದು. ಲಕ್ಷ್ಮಿ ಕಟಾಕ್ಷದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶಿಕ್ಷಕರು ಮತ್ತು ವಾಣಿಜ್ಯ ಇಲಾಖೆ ನೌಕರರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಹೋಟೆಲ್ ಮತ್ತು ಬೇಕರಿ ಉದ್ಯಮದಲ್ಲಿ ಲಾಭ ನಿರೀಕ್ಷಿಸಬಹುದು.
ಮೀನ ರಾಶಿ: ವಿದೇಶ ಪ್ರವಾಸದ ಯೋಗವಿದೆ. ಸ್ತ್ರೀಯರ ಜೊತೆಗಿನ ವ್ಯವಹಾರದಲ್ಲಿ ನಷ್ಟ ಸಂಭವಿಸಬಹುದು, ಎಚ್ಚರಿಕೆ ವಹಿಸಿ. ನೇರ ಮತ್ತು ನಿಷ್ಟುರ ಮಾತುಗಳು ಶತ್ರುಗಳನ್ನು ಜಾಸ್ತಿ ಮಾಡಬಹುದು. ಹೈನುಗಾರಿಕೆಯಲ್ಲಿ ಲಾಭದಾಯಕ ಬದಲಾವಣೆ ಇರಲಿದೆ.
ಗಮನಿಸಿ: ಇದು ಸಾಮಾನ್ಯ ರಾಶಿ ಭವಿಷ್ಯವಾಗಿದೆ. ನಿಮ್ಮ ನಿಖರ ಜಾತಕ ವಿಶ್ಲೇಷಣೆಗಾಗಿ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.
ಸಂಪರ್ಕಿಸಿ:
ಸೋಮಶೇಖರ್ ಗುರೂಜಿ (B.Sc)
ಜ್ಯೋತಿಷ್ಯ, ವಾಸ್ತು ಮತ್ತು ಸಂಖ್ಯಾಶಾಸ್ತ್ರ ಪರಿಣಿತರು.
ದೂರವಾಣಿ: 93534 88403




