ನವದೆಹಲಿ: ದೀಪಾವಳಿಗೆ ಪಟಾಕಿ ಹೊಡೆಯಬೇಡಿ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಅವರು ಕೊಹ್ಲಿ ಅನುಷ್ಕಾಳ ನಾಯಿ ಎಂದು ಕರೆದು ಪೇಚಿಗೆ ಸಿಲುಕಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಅವರು,ಅನುಷ್ಕಾ ತಮ್ಮ ನಾಯಿ ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇಲ್ಲ.ನಾಯಿಗಿಂತ ಯಾರೂ ಹೆಚ್ಚು ನಿಷ್ಠಾವಂತರಲ್ಲ. ಕೊಹ್ಲಿಯನ್ನು ನಿಂದಿಸುತ್ತಿರುವ ಕಿಡಿಗೇಡಿಗಳು ಮತ್ತು ಮೂರ್ಖರು ಡಿಎನ್ಎ ಪರೀಕ್ಷೆ ಮಾಡಿಸಿಕೊಂಡು ತಾವು ಭಾರತದವರು ಹೌದೋ, ಅಲ್ಲವೋ ಎಂದು ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರವಾಸ ಕೈಗೊಂಡಿದ್ದು, ಸರಣಿ ಗೆಲುವಿಗೆ ಸಾಕಷ್ಟು ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ.
विराट कोहली के सुझाव का स्वागत लेकिन कुछ दुष्टों ने ट्वीटर पर भद्दी गालियाँ देना शुरू कर दी।हैरान हूँ कि सरकार ये सब देख रही जैसे कि मौन सहमति हो। इनके ख़िलाफ़ कार्यवाही अभी तक नही हुई।ये इंसान नही हो सकते।कुत्ते को भी बुरा कह रहे हैं ।कुत्ता से ज़्यादा वफ़ादार कोई नही।
— Dr. Udit Raj (@Dr_Uditraj) November 15, 2020