ಕನ್ನಡದ ಮೈನಾ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ಸಿನಿಮಾ ಖ್ಯಾತಿಯ ಬಹುಭಾಷಾ ನಟಿ ನಿತ್ಯಾ ಮೆನನ್ ಯುವಕನೊಬ್ಬನಿಂದ 6 ವರ್ಷದಿಂದ ಅನುಭವಿಸಿದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ.
ಹೌದು, ಮಾಧ್ಯಮವೊಂದರ ಮುಂದೆ ಮಾತನಾಡಿದ ನಟಿ ನಿತ್ಯಾ ಮೆನನ್ ಅವರು, ಯುವಕನೊಬ್ಬನಿಂದ ಆರು ವರ್ಷಗಳಿಂದ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ಪಾಲಕರನ್ನು ಉಲ್ಲೇಖಿಸಿ ಹಿಂಸೆ ನೀಡುತ್ತಿದ್ದಾನೆ. ಆತನ 30ಕ್ಕೂ ಹೆಚ್ಚು ನಂಬರ್ ಬ್ಲಾಕ್ ಮಾಡಿದ್ದೇನೆ. ಅವನ ಮಾತು ನಂಬುವವರು ನಿಜಕ್ಕೂ ಮೂರ್ಖರು ಎಂದಿದ್ದಾರೆ.
ಇನ್ನು, ನಟಿ ನಿತ್ಯಾ ಮೆನನ್ ಮಾತನಾಡಿರುವುದು ಸಂತೋಷ್ ವಾರ್ಕಿ ಎಂಬಾತನ ವಿರುದ್ಧ ಆಗಿದ್ದು, ಆತ ಸಿನಿಮಾ ವಿಮರ್ಶೆ ಮೂಲಕ ಹೆಸರುವಾಸಿಯಾಗಿದ್ದನು ಎನ್ನಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.