ಕೋಲ್ಕತಾ: ಎರಡು ದಿನಗಳ ಭೇಟಿಯ ಅಂಗವಾಗಿ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಡಳಿತ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳಿ ಸಂಸ್ಕೃತಿಯನ್ನು ಪಾತಾಳಕ್ಕೆ ನೂಕುತ್ತಿದ್ದಾರೆ ಮತ್ತು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ವಿರುದ್ಧವಾಗಿ ನಡೆದುಕೊಳ್ಳಿತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಶುಕ್ರವಾರ ತನ್ನ ಎರಡನೇ ದಿನದ ಪ್ರವಾಸದ ಅಂಗವಾಗಿ, ಅಮಿತ್ ಶಾ ಬಂಗಾಳದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿದರು. ಈಶ್ವರ್ ಚಂದ್ರ ವಿದ್ಯಾಸಾಗರ್, ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರನ್ನು ಮಹಾನ್ ಬುದ್ಧಿಜೀವಿಗಳ ಜನ್ಮಸ್ಥಳ ಎಂದು ಕೊಂಡಾಡಿದರು. ಸಿಎಂ ಮಮತಾ ಅವರು ಬಂಗಾಳದ ಜನರ ಭಾವನೆಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಮತ್ತು ಬಂಗಾಳ ವೀರರ ಆಕಾಂಕ್ಷೆಗಳ ವಿರುದ್ಧ ತೀರ್ಪು ನೀಡುತ್ತಿದ್ದಾರೆ ಎಂದು ಕಠಿಣ ಹೇಳಿಕೆ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಜಯ ಸಾಧಿಸಿ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅಮಿತ್ ಶಾ ಅವರ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ತೀವ್ರವಾಗಿ ಪ್ರತಿಕ್ರಿಯಿಸಿದೆ. ಬಂಗಾಳದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಇತರರು ಹೇಳುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದೆ.
ಇನ್ನು ಪಕ್ಷದ ಸಂಸದೆ, ನಟಿ ನುಸ್ರತ್ ಜಹಾನ್ ಕೂಡ ಟ್ವಿಟ್ಟರ್ ನಲ್ಲಿ ಅಮಿತ್ ಷಾ ವಿರುದ್ಧ ಪ್ರತಿಕ್ರಿಯಿದ್ದು. ರಾಜಕೀಯ ಲಾಭಕ್ಕಾಗಿ ಬಂಗಾಳದ ಜನರ ಭಾವನೆಗಳಿಗೆ ಎಷ್ಟು ಸಾರಿ ಅವಮಾನ ಮಾಡಿತ್ತೀರಿ ಎಂದು ಕಿಡಿಕಾರಿದ್ದಾರೆ. ತಮ್ಮ ಸಂಸ್ಕೃತಿಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಪ್ರಚಾರ ಮಾಡುವುದು ಸೂಕ್ತವಲ್ಲ ಎಂದು ಎಚ್ಚರಿಸಿದ್ದಾರೆ. ಈಶ್ವರ್ ಚಂದ್ರವಿದ್ಯಸಾಗರ್, ಬೀರ್ಸಮುಂಡಲ ಅವರ ಇತಿಹಾಸವನ್ನು ತಿಳಿದುಕೊಂಡು ಮಾತನಾಡಿ ಎಂದು ಹೇಳಿದ್ದಾರೆ. ಮಮತಾ ಅವರ ನಾಯಕತ್ವದಲ್ಲಿ ಬಂಗಾಳದ ಜನರು ಸಂತೋಷದಿಂದ ಬದುಕುತ್ತಿದ್ದಾರೆ ಎಂದು ಸಂಸದೆ, ನಟಿ ನುಸ್ರತ್ ಜಹಾನ್ ಹೇಳಿದ್ದಾರೆ.
From Ishwarchandra Vidyasagar to Birsa Munda, what is this blatant disrespect towards Bengal’s legendary icons, @AmitShah ji?
How many more times will you misuse Bengal’s culture & heritage for your political propaganda?#BengalAsksAmitShahhttps://t.co/eEXSum1a0h
— Nusrat Jahan Ruhi (@nusratchirps) November 6, 2020