ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಕೊಡದೆ ಅನ್ಯಾಯವೆಸಗಿದ ಸರ್ಕಾರ, ಕನ್ನಡ ಕೊಂದು ಅದರ ಸಮಾಧಿಯ ಮೇಲೆ ಬಿಜೆಪಿ ಯಾವ ಗೋಪುರ ಕಟ್ಟಲು ಹೊರಟಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹೌದು, ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಕೊಡದೆ ಅನ್ಯಾಯವೆಸಗಿದ ಸರ್ಕಾರ, ಸಂಸ್ಕೃತ ವಿವಿಗೆ ಬಹು ಕಾಳಜಿಯಿಂದ 359 ಕೋಟಿ ರೂ. ಹಾಗೂ 100 ಎಕರೆ ಜಾಗ ನೀಡಿದೆ. ಕನ್ನಡ ಕೊಂದು ಅದರ ಸಮಾಧಿಯ ಮೇಲೆ ಬಿಜೆಪಿ ಯಾವ ಗೋಪುರ ಕಟ್ಟಲು ಹೊರಟಿದೆ? ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಆರ್ ಎಸ್ಎಸ್ ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಕನ್ನಡಿಗರ ಸ್ವಾಭಿಮಾನವನ್ನೇ ಅಡ ಇಡುತ್ತಿರುವುದು ಖಂಡನೀಯ ಎಂದು ಅವರು ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಕೊಡದೆ ಅನ್ಯಾವೆಸಗಿದ ಸರ್ಕಾರ,
ಸಂಸ್ಕೃತ ವಿವಿಗೆ ಬಹು ಕಾಳಜಿಯಿಂದ 359 ಕೋಟಿ, 100 ಎಕರೆ ಜಾಗ ನೀಡಿದೆ.ಕನ್ನಡ ಕೊಂದು ಅದರ ಸಮಾಧಿಯ ಮೇಲೆ ಯಾವ ಗೋಪುರ ಕಟ್ಟಲು ಹೊರಟಿದೆ ಬಿಜೆಪಿ?
ಮುಖ್ಯಮಂತ್ರಿಗಳು RSS ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಕನ್ನಡಿಗರ ಸ್ವಾಭಿಮಾನನ್ನೇ ಅಡ ಇಡುತ್ತಿರುವುದು ಖಂಡನೀಯ
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 17, 2022