ಬೆಂಗಳೂರು: ರಾಜ್ಯದಲ್ಲಿ ಇಂದು 261 ನೂತನ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 05 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ಅವರು, ರಾಜ್ಯದಲ್ಲಿ ಈವರೆಗೆ ಒಟ್ಟು 38,095 ಜನ ಮೃತಪಟ್ಟಿದ್ದು, ಪ್ರಸ್ತುತ ಪಾಸಿಟಿವಿಟಿ ದರ ಶೇ.0.48%ರಷ್ಟಿದೆ. ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 8,267 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇಂದು ವಿವಿಧ ಆಸ್ಪತ್ರೆಗಳಿಂದ 296 ಜನ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಇಂದೇ 261 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಳಗಾವಿ-2, ಬೆಂ.ಗ್ರಾ-1, ಬೆಂಗಳೂರು-157, ಬೀದರ್-1, ಚಾಮರಾಜನಗರ-1,ಚಿತ್ರದುರ್ಗ-2, ದ.ಕನ್ನಡ-16, ಧಾರವಾಡ-6, ಹಾಸನ-7, ಕಲಬುರಗಿ-2, ಕೊಡಗು-9, ಕೋಲಾರ-5, ಮಂಡ್ಯ-4, ಮೈಸೂರು-13, ರಾಮನಗರ-1, ಶಿವಮೊಗ್ಗ-6, ತುಮಕೂರು-15, ಉಡುಪಿ-6, ಉ.ಕನ್ನಡ-4, ವಿಜಯಪುರ-3, ಯಾದಗಿರಿ-0, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-0, ದಾವಣಗೆರೆ-0, ಬಾಗಲಕೋಟೆ-0, ಬಳ್ಳಾರಿ-0, ಗದಗ-0, ಹಾವೇರಿ-0, ಕೊಪ್ಪಳ-0, ರಾಯಚೂರು-0