ಬೆಂಗಳೂರು: ಪಕ್ಕದ ರಾಜ್ಯ ತೆಲಂಗಾಣದಿಂದ ತನ್ನನ್ನು ಕಾಣಲು ಬಂದು ನಿರಾಸೆಯಿಂದ ವಾಪಸ್ಸಾದ ಅಭಿಮಾನಿಗೆ ಮೀಟ್ ಆಗುತ್ತೇನೆ ಎಂದು ನ್ಯಾಷನಲ್ ಕ್ರಶ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಭರವಸೆ ನೀಡಿದ್ದಾರೆ.
ಹೌದು ತೆಲಂಗಾಣದ ಆಕಾಶ್ ತ್ರಿಪಾಠಿ ಎಂಬ ಅಭಿಮಾನಿ ರಶ್ಮಿಕಾ ಅವರನ್ನು ಕಾಣಲು ವಿರಾಜಪೇಟೆಗೆ ಬರುವ ದಾವಂತದಲ್ಲಿ ವಿರಾಜಪೇಟೆಯ ಮಗ್ಗುಲ ಗ್ರಾಮಕ್ಕೆ ತೆರಳಿ ಅಲ್ಲಿ ನಟಿ ರಶ್ಮಿಕಾ ಮನೆ ಎಲ್ಲಿ ಎಂದು ಸ್ಥಳೀಯರನ್ನು ವಿಚಾರಿಸಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಎಚ್ಚರಿಕೆ ನೀಡಿ ವಿರಾಜಪೇಟೆ ಪೊಲೀಸರು ವಾಪಸ್ ಕಳುಹಿಸಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದನ್ನು ನೋಡಿದ ನಟಿ ರಶ್ಮಿಕಾ ಟ್ವೀಟ್ ಮಾಡಿ, ಖಂಡಿತವಾಗಿಯೂ ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ ಎಂದು ಭರವಸೆ ನೀಡಿದ್ದಾರೆ. ‘ಅಷ್ಟು ದೂರದಿಂದ ನನ್ನನ್ನು ಕಾಣಲು ಬಂದಿದ್ದೀರಿ. ಆದರೆ ನಿಮ್ಮನ್ನು ಭೇಟಿ ಆಗದಿರುವುದಕ್ಕೆ ವಿಷಾದಿಸುತ್ತೇನೆ ಎಂದು ಹೇಳಿದ್ದು, ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ.
ನನ್ನ ಮೇಲೆ ನಿಮ್ಮ ಪ್ರೀತಿ ಇದೆ ರೀತಿ ಇರಲಿ. ಆದರೆ, ಹೀಗೆ ದೂರದಿಂದ ಕಷ್ಟಪಟ್ಟು ನನ್ನನ್ನು ಭೇಟಿಯಾಗುವ ತೊಂದರೆ ತೆಗೆದುಕೊಳ್ಳಬೇಡಿ, ಮುಂದೊಮ್ಮೆ ಭೇಟಿಯಾಗುವ ಸಂದರ್ಭ ಬರಬಹುದು’ ಎಂದು ರಶ್ಮಿಕಾ ಅಭಿಮಾನಿಯನ್ನು ಸಂತೈಸಿದ್ದಾರೆ.
Guys it just came to my notice that one of you had travelled super far and have gone home to see me..
Please don’t do something like that.. i feel bad that I didn’t get to meet you🥺 I really really hope to meet you one day❤️ but for now show me love here.. I’ll be happy! 🌸🥰— Rashmika Mandanna (@iamRashmika) June 27, 2021