ಮದುವೆಯಾದ ರಾತ್ರಿಯೇ ಮದುಮಗ ಸಾವು!; ಮೊದಲ ರಾತ್ರಿ ಆ ಕೋಣೆಯಲ್ಲಿ ಆಗಿದ್ದೇನು?

ಹೈದರಾಬಾದ್: ಮದುವೆ ಮಾಡಿದ ವಧುವರರ ಕುಟುಂಬಸ್ಥರು ಸಂಭ್ರಮದಲ್ಲಿ ಮುಳುಗಿ ತೇಲುತ್ತಿದ್ದರೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ನವವಿವಾಹಿತ ದುರಂತ ಅಂತ್ಯ ಕಂಡಿರುವ ದಾರುಣ ಘಟನೆ ತೆಲಂಗಾಣದ ಜೋಗುಲಾಂಬ ಗಡ್ವಾಲಾ ಜಿಲ್ಲೆಯ ವದ್ದೇಪಳ್ಳಿಯಲ್ಲಿ ನಡೆದಿದೆ. ಹೌದು,…

marriage vijayaprabha

ಹೈದರಾಬಾದ್: ಮದುವೆ ಮಾಡಿದ ವಧುವರರ ಕುಟುಂಬಸ್ಥರು ಸಂಭ್ರಮದಲ್ಲಿ ಮುಳುಗಿ ತೇಲುತ್ತಿದ್ದರೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ನವವಿವಾಹಿತ ದುರಂತ ಅಂತ್ಯ ಕಂಡಿರುವ ದಾರುಣ ಘಟನೆ ತೆಲಂಗಾಣದ ಜೋಗುಲಾಂಬ ಗಡ್ವಾಲಾ ಜಿಲ್ಲೆಯ ವದ್ದೇಪಳ್ಳಿಯಲ್ಲಿ ನಡೆದಿದೆ.

ಹೌದು, ಸೂರ್ಯ ಬಾಬು ಮೃತ ದುದೈರ್ವಿಯಾಗಿದ್ದು, ಇವನ ಮದುವೆ ಭಾನುವಾರ ಸಂಜೆ ನಡೆದಿತ್ತು. ಮದ್ವೆಯಾದ ಐದೇ ತಾಸಿಗೆ ಅಂದರೆ ಆ ದಿನದ ರಾತ್ರಿಯೇ ಮದುಮಗ ಮನೆಯ ಕೋಣೆಯಲ್ಲಿ ನೇನುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಕಂಡು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

ಇನ್ನು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದು, ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿದು ಬಂದಿಲ್ಲ. ಆದರೆ ಮದುಮಗನ ಸಾವಿನಿಂದ ಮದುಮಗಳು ಮತ್ತು ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.