ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಬಜೆಟ್ ನಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರದಾನ ಮಂತ್ರಿ ಉಜ್ವಾಲಾ ಯೋಜನೆಯಡಿ ಮತ್ತೊಂದು ಕೋಟಿ ಹೊಸ ಅನಿಲ ಸಂಪರ್ಕವನ್ನು ಉಚಿತವಾಗಿ ನೀಡಲಾಗುವುದು ಹೇಳಿಕೆ ನೀಡಿದ್ದರು. ಆದರೆ, ಈ ನಿಯಮ ಇನ್ನೂ ಜಾರಿಗೆ ಬಂದಿಲ್ಲ.
ಇತ್ತೀಚಿನ ವರದಿಗಳ ಪ್ರಕಾರ, ಉಚಿತ ಅನಿಲ ಸಂಪರ್ಕಗಳ ಯೋಜನೆಯು ಈ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆಯಿದ್ದು, ಇದು ಸಂಭವಿಸಿದಲ್ಲಿ ಇದರಿಂದ ಅನೇಕ ಬಡ ಜನರು ಪ್ರಯೋಜನ ಪಡೆಯಲಿದ್ದು, ಹೊಸ ಅನಿಲ ಸಂಪರ್ಕವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಉಜ್ವಾಲಾ ಯೋಜನೆಯಡಿ 2021 ರ ಜನವರಿ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರ 8.3 ಕೋಟಿ ಎಲ್ಪಿಜಿ ಸಂಪರ್ಕವನ್ನು ನೀಡಿದೆ ಎಂದು ತಿಳಿದುಬಂದಿದೆ.
ಮೋದಿ ಸರ್ಕಾರ ಕಳೆದ ವರ್ಷ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದವರಿಗೆ ಮೂರು ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ನೀಡಿತ್ತು. ಆದರೆ, ಈ ಪ್ರಯೋಜನವು ಉಜ್ವಾಲಾ ಯೋಜನೆಗೆ ಸೇರಿದವರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕು. ಗರಿಬ್ ಕಲ್ಯಾಣ್ ಪ್ಯಾಕೇಜ್ನ ಭಾಗವಾಗಿ ಕೇಂದ್ರ ಸರ್ಕಾರ ಈ ಉಚಿತ ಸಿಲಿಂಡರ್ಗಳನ್ನು ಒದಗಿಸಿದೆ.
ಒಂದು ವೇಳೆ ನೀವು ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸಿದರೆ, 3,200 ರೂ. ವ್ಯಯವಾಗುತ್ತದೆ. ಆದರೆ, ನೀವು ಉಜ್ವಾಲಾ ಯೋಜನೆಯಡಿ ಎಲ್ಪಿಜಿ ಸಂಪರ್ಕವನ್ನು ಪಡೆದರೆ, ನಿಮಗೆ 1,600 ರೂ. ಸಬ್ಸಿಡಿ ಸಿಗುತ್ತದೆ. ಕೇಂದ್ರ ಸರ್ಕಾರ ಈ ಹಣವನ್ನು ಪಾವತಿಸುತ್ತದೆ. ಉಳಿದ 1,600 ರೂಗಳನ್ನು ತೈಲ ಕಂಪನಿಗಳು ನೀಡಲಿವೆ. ಆದರೆ, ಗ್ರಾಹಕರು 1600 ರೂಗಳನ್ನು ನಂತರ ತೈಲ ಕಂಪನಿಗಳಿಗೆ ಇಎಂಐ (EMI) ರೂಪದಲ್ಲಿ ಪಾವತಿಸಬೇಕಾಗುತ್ತದೆ.