ಕಲ್ಕತ್ತಾ : ಯಾಸ್ ಚಂಡಮಾರುತದ ಕುರಿತಾದಂತೆ ನಡೆದ ಭೇಟಿಯ ಸಂದರ್ಭ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರನ್ನು 30 ನಿಮಿಷಗಳ ಕಾಲ ಕಾಯುವಂತೆ ಮಾಡಿದ್ದಾರೆ ಎಂಬ ಕೇಂದ್ರ ಸರಕಾರದ ಆರೋಪಕ್ಕೆ ಟಿಎಂಸಿ ಸಂಸದೆ ಮಹುಆ ಮೊಯಿತ್ರ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, “ಜನ ಏಳು ವರ್ಷದಿಂದ 15 ಲಕ್ಷ ರೂಗಳಿಗೆ ಕಾಯುತ್ತಿದ್ದಾರೆ, ಸ್ವಲ್ಪ ನೀವೂ ಕಾಯಿರಿ” ಎಂದು ಸಂಸದೆ ಮಹುಆ ಮೊಯಿತ್ರ ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ.
ಈ ಕುರಿತು ಸಂಸದೆ ಮಹುಆ ಮೊಯಿತ್ರ ಟ್ವೀಟ್ ಮಾಡಿದ್ದು, ಪ್ರಧಾನಿಯನ್ನು “30 ನಿಮಿಷ ಕಾಯಿಸಿದ್ದಾರೆ ಎನ್ನುವ ಆರೋಪದ ಕುರಿತಂತೆ ತುಂಬಾ ಚರ್ಚೆಗಳು ನಡೆಯುತ್ತಿವೆ. ಆದರೆ, ಭಾರತೀಯರು 15 ಲಕ್ಷ ರೂಗಳಿಗೋಸ್ಕರ 7 ವರ್ಷಗಳಿಂದ ಎಟಿಎಮ್ ನ ಮುಂಭಾಗದಲ್ಲಿ ಗಂಟೆಗಟ್ಟಲೆ ಕಾದಿದ್ದಾರೆ.
ಇನ್ನು, ಲಸಿಕೆ ಹಾಕಿಸಿಕೊಳ್ಳಲು ತಿಂಗಳುಗಟ್ಟಲೆ ಕಾಯುತ್ತಿದ್ದು, ಈಗ ನೀವೂ ಕಾಯಿರಿ” ಎಂದು ಸಂಸದೆ ಟ್ವಿಟ್ಟರ್ ನಲ್ಲಿ ಪ್ರಧಾನಿ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
So much fuss over an alleged 30 min wait?
Indians waiting 7 years for ₹15 lakhs
Waiting hours at ATM queues
Waiting months for vaccines dueThoda aap bhi wait kar lijiye kabhi kabhi…
— Mahua Moitra (@MahuaMoitra) May 28, 2021