ಪಿಪಿಎಫ್, ಸುಕನ್ಯಾ ಸಮೃಧಿ, ಪೋಸ್ಟ್ ಆಫೀಸ್ ಯೋಜನೆಗಳ ಹೂಡಿಕೆದಾರರಿಗೆ ಕೇಂದ್ರ ಸರ್ಕಾರದಿಂದ ಒಳ್ಳೆಯ ಸುದ್ದಿ

money vijayaprabha news money vijayaprabha news

ಕೈಯಲ್ಲಿ ಎಲ್ಲಿಯಾದರೂ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ತಕ್ಷಣವೇ ನೆನೆಪಿಗೆ ಬರುವ ಸ್ಕೀಮ್ ಸಣ್ಣ ಉಳಿತಾಯ ಯೋಜನೆಗಳು. ಇವುಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಯಾವುದೇ ಅಪಾಯವಿಲ್ಲ. ನಿಖರವಾದ ಆದಾಯವನ್ನು ಪಡೆಯಬಹುದು. ಅದಕ್ಕಾಗಿಯೇ ಅನೇಕ ಜನರು ಇವುಗಳಲ್ಲಿ ಹಣವನ್ನು ಠೇವಣಿ ಇಡುತ್ತಾರೆ.

ಆದರೆ ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಡಿ. ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತದೆ. ಅಂದರೆ ಬಡ್ಡಿದರಗಳನ್ನು ಹೆಚ್ಚಿಸುವುದು. ಇಲ್ಲದಿದ್ದರೆ ಅದು ಕಡಿಮೆ ಮಾಡುವುದು. ಇಲ್ಲದಿದ್ದರೆ ಸ್ಥಿರವಾಗಿ ಮುಂದುವರೆಸುವುದು.

ಕರೋನಾ ವೈರಸ್‌ನಿಂದಾಗಿ ಅನೇಕ ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಎಫ್‌ಡಿ ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಉಳಿತಾಯ ಖಾತೆಗಳಲ್ಲಿ ಬಡ್ಡಿದರಗಳು ಕಡಿಮೆ. ಅದಕ್ಕಾಗಿಯೇ ಕೇಂದ್ರ ಸರ್ಕಾರವು ಈ ಬಾರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ ಎಂದು ಹಲವರು ಭಾವಿಸಿದ್ದರು.

Advertisement

ಆದರೆ, ಬಡ್ಡಿದರಗಳನ್ನು ಕಡಿತಗೊಳಿಸದೆ ಮೋದಿ ಸರ್ಕಾರ ಈ ಬಾರಿ ಸ್ಥಿರವಾಗಿದೆ. ಇದರೊಂದಿಗೆ ಜನವರಿಯಿಂದ ಮಾರ್ಚ್‌ವರೆಗೆ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇವರೆಗಿನಾ ಬಡ್ಡಿದರ ಮುಂದುವರಿಯುತ್ತದೆ.

ಪ್ರಸ್ತುತ ಸಾರ್ವಜನಿಕ ಭವಿಷ್ಯ ನಿಧಿ ಪಿಪಿಎಫ್ ಮೇಲಿನ ಬಡ್ಡಿದರವು ಶೇಕಡಾ 7.1 ರಷ್ಟಿದೆ. ಹಿರಿಯ ನಾಗರಿಕ ಉಳಿತಾಯ ಯೋಜನೆಯ ಬಡ್ಡಿದರವು ಶೇಕಡಾ 7.4 ರಷ್ಟಿದೆ. ಒಂದು ವರ್ಷದ ಅವಧಿಯ ಠೇವಣಿಗಳ ಮೇಲೆ ಶೇ 5.5 ರಷ್ಟು ಬಡ್ಡಿ ಪಡೆಯಬಹುದು. ಹೆಣ್ಣು ಮಕ್ಕಳ ಹೆಸರಿನಲ್ಲಿ ತೆರೆಯುವ ಸುಕನ್ಯಾ ಸಮೃಧಿ ಖಾತೆಯು ಶೇಕಡಾ 7.6 ರಷ್ಟು ಬಡ್ಡಿದರವನ್ನು ಹೊಂದಿದೆ.

ಇದನ್ನು ಓದಿ: ಮನೆಯಿಂದಲೇ ನಿಮ್ಮ ಆಧಾರ್ ಕಾರ್ಡ್ ಹೇಗೆ ನವೀಕರಿಸುವುದು? ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement