ಬೆಂಗಳೂರು, ನವೆಂಬರ್ 11: ರಾಜ್ಯದ ಯುವ ಶಕ್ತಿಯನ್ನು ಒಲಿಂಪಿಕ್ ಮಟ್ಟಕ್ಕೆ ಎತ್ತಿಕಟ್ಟುವ ನಿಟ್ಟಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 2028ರ ಒಲಿಂಪಿಕ್ಸ್ಗೆ ತಯಾರಿ ನಡೆಸಲು ವಿಶೇಷ ಕ್ರಮಗಳು ಜಾರಿಗೆ ಬರಲಿವೆ.
ಅಂತಾರಾಷ್ಟ್ರೀಯ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ರಾಜ್ಯ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಮೂರ್ತಿ ಎಂಬಂತೆ ಪ್ರೋತ್ಸಾಹ ನೀಡುತ್ತಿದ್ದಾರೆ.60 ಪ್ರತಿಭೆಗಳಿಗೆ ವಾರ್ಷಿಕ 10 ಲಕ್ಷ ಧನಸಹಾಯಒಲಿಂಪಿಕ್ ಅಧಿಕೃತ ಕ್ರೀಡೆಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ನಾಟಕದ 60 ಆಯ್ಕೆಯ ಕ್ರೀಡಾಪಟುಗಳಿಗೆ ಪ್ರತಿ ವರ್ಷ 10 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಈ ಯೋಜನೆ ರಾಜ್ಯದ ಕ್ರೀಡಾ ಭವಿಷ್ಯವನ್ನು ಬೆಳೆಸುವಲ್ಲಿ ಮೈಲುಗಲ್ಲಾಗಲಿದೆ.ನಾನಾ ಬಗೆಯ ಪ್ರೋತ್ಸಾಹ ಯೋಜನೆಗಳುನಗದು ಬಹುಮಾನ: 2023 ಮತ್ತು 2024ರಲ್ಲಿ ರಾಷ್ಟ್ರೀಯ/ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆದ್ದ ಕ್ರೀಡಾಪಟುಗಳಿಗೆ ವಿಶೇಷ ನಗದು ಪುರಸ್ಕಾರ.
ಶೈಕ್ಷಣಿಕ ಶುಲ್ಕ ಮರುಪಾವತಿ: ಪಿಯುಸಿ, ಪದವಿ, ಸ್ನಾತಕೋತ್ತರ (ವೃತ್ತಿಪರ ಕೋರ್ಸ್ಗಳೂ ಸೇರಿ) ಓದುತ್ತಿರುವ ವಿಜೇತ ಕ್ರೀಡಾಪಟುಗಳಿಗೆ ಶುಲ್ಕ ಮರುಪಾವತಿ.
ಕ್ರೀಡಾ ವಿದ್ಯಾರ್ಥಿವೇತನ: 2024-25ರಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಆಡಿದ 6ರಿಂದ 10ನೇ ತರಗತಿ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ.
ಕ್ರೀಡಾ ಪ್ರಶಸ್ತಿಗಳ ಮಾಲೆ – 2024
- ಏಕಲವ್ಯ ಪ್ರಶಸ್ತಿ: ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿದವರಿಗೆ.
- ಜೀವಮಾನ ಸಾಧನೆ ಪ್ರಶಸ್ತಿ: ಉತ್ತಮ ಕ್ರೀಡಾಪಟುಗಳನ್ನು ರೂಪಿಸಿದ ತರಬೇತುದಾರರಿಗೆ.
- ಕರ್ನಾಟಕ ಕ್ರೀಡಾರತ್ನ: ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳಲ್ಲಿ ಗೆದ್ದವರಿಗೆ.
- ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ: ಕ್ರೀಡಾ ಅಭಿವೃದ್ಧಿಗೆ ಕಾಣಿಕೆ ನೀಡಿದ ಸಂಸ್ಥೆಗಳಿಗೆ.
ಸರ್ಕಾರಿ ಉದ್ಯೋಗಕ್ಕೆ ನೇರ ನೇಮಕಾತಿ
ಸಾಧಕ ಕ್ರೀಡಾಪಟುಗಳಿಗೆ ಗ್ರೂಪ್-ಎ ಮತ್ತು ಬಿ ಹುದ್ದೆಗಳಲ್ಲಿ ನೇರ ನೇಮಕಾತಿಗೆ ಅವಕಾಶಪತ್ರ ವಿತರಣಾ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕೆ. ಗೋವಿಂದರಾಜ್ ಉಪಸ್ಥಿತರಿದ್ದರು.ಅರ್ಜಿ ಸಲ್ಲಿಕೆ: ಸೇವಾಸಿಂಧು ಪೋರ್ಟಲ್ ಮೂಲಕಎಲ್ಲಾ ಯೋಜನೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು. ವೆಬ್ಸೈಟ್: https://sevasindhu.karnataka.gov.in
ಕೊನೆಯ ದಿನಾಂಕ: ಡಿಸೆಂಬರ್ 3, 2025
ಹೆಚ್ಚಿನ ಮಾಹಿತಿಗೆ: ಯುವ ಸಹಾಯವಾಣಿ – 155265ಈ ಯೋಜನೆಗಳು ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ರಚಿಸಲಿವೆ. ಪ್ರತಿಭಾವಂತ ಕ್ರೀಡಾಪಟುಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!




