ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯನ್ನು (Prime Minister Kisan Sampada Yojana) ದೇಶದ ಆಹಾರ ಸಂಸ್ಕರಣಾ ವಲಯವನ್ನು ಆಧುನೀಕರಿಸಲು ಮತ್ತು ಬಲಪಡಿಸಲು ಜಾರಿಗೊಳಿಸಲಾಗಿದೆ. ಇದು ರೈತರಿಗೆ ಉತ್ತಮ ಆದಾಯ ಗಳಿಸಲು, ಕೃಷಿ ಸಮೂಹಗಳನ್ನು ಗುರುತಿಸಲು ಮತ್ತು ಉತ್ಪಾದನಾ ಕೇಂದ್ರಗಳಿಂದ ಮಾರುಕಟ್ಟೆಗೆ ಆಹಾರ ಉತ್ಪನ್ನಗಳ ಸುಗಮ ವರ್ಗಾವಣೆಗೆ ಸಹಾಯ ಮಾಡುತ್ತದೆ.
ಯೋಜನೆ ಅಡಿಯಲ್ಲಿರುವ ಘಟಕಗಳು
ಈ ಯೋಜನೆಯು ಮೆಗಾ ಫುಡ್ ಪಾರ್ಕ್ಗಳ ನಿರ್ಮಾಣ, ಸಂಯೋಜಿತ ಶೀತಲ ಸರಪಳಿ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ, ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳಿಗೆ ಮೂಲಸೌಕರ್ಯ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣಾ ಸಾಮರ್ಥ್ಯಗಳ ನಿರ್ಮಾಣ/ವಿಸ್ತರಣೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಭರವಸೆ ಮೂಲಸೌಕರ್ಯ, ಮಾನವ ಸಂಪನ್ಮೂಲಗಳು ಮತ್ತು ಸಂಸ್ಥೆಗಳ ಅಭಿವೃದ್ಧಿ, ಹಾಗೂ ಬೆಂಬಲಿತ ವಲಯದ ಉನ್ನತೀಕರಣವನ್ನು ಒಳಗೊಂಡಿದೆ. ಈ ಘಟಕಗಳು ಕೃಷಿ-ಆಧಾರಿತ ಉದ್ಯಮಗಳ ಬೆಳವಣಿಗೆಗೆ ಪೂರಕವಾಗಿವೆ.
ಅರ್ಹತಾ ಮಾನದಂಡಗಳು
ಸಾಮಾನ್ಯವಾಗಿ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ರೈತರು, ರೈತ ಉತ್ಪಾದಕ ಸಂಸ್ಥೆಗಳು (FPOಗಳು), ಕೃಷಿ ಆಧಾರಿತ ಕೈಗಾರಿಕೆಗಳು, ಆಹಾರ ಸಂಸ್ಕರಣಾ ಘಟಕಗಳು, ಸಹಕಾರಿ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು (SHGಗಳು) ಮತ್ತು ಸಂಸ್ಥೆಗಳು ಅರ್ಹರಾಗಿರುತ್ತಾರೆ. ಅನುಷ್ಠಾನಗೊಳಿಸುವ ಸಂಸ್ಥೆಗಳು ವಿವರಿಸಿದ ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಘಟಕಗಳೂ ಪ್ರಯೋಜನ ಪಡೆಯಬಹುದು.
ಪ್ರಯೋಜನಗಳು
ಯೋಜನೆಯು ಕೃಷಿ ಉತ್ಪನ್ನಗಳ ಸಂಸ್ಕರಣೆಯನ್ನು 12% ಹೆಚ್ಚಿಸಿದೆ, 2 ಮಿಲಿಯನ್ಗಿಂತಲೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ, ಸಂಸ್ಕರಿಸಿದ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಸುಧಾರಿಸಿದೆ, ರಫ್ತುಗಳನ್ನು 15% ರಷ್ಟು ಉತ್ತೇಜಿಸಿದೆ ಮತ್ತು ಕೊಯ್ಲಿನ ನಂತರದ ನಷ್ಟವನ್ನು 5% ರಷ್ಟು ಕಡಿಮೆ ಮಾಡಿದೆ. ಇದು ಭಾರತದ ಕೃಷಿ ಮತ್ತು ಆಹಾರ ಸಂಸ್ಕರಣಾ ವಲಯಗಳ ಒಟ್ಟಾರೆ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು MoFPI ವೆಬ್ಸೈಟ್ ಮೂಲಕ. ‘EOI Registration’ R&D ಲಿಂಕ್ ಆಯ್ಕೆಮಾಡಿ. NGO ದರ್ಪಣ್ ಪೋರ್ಟಲ್ನಲ್ಲಿ ನೋ೦ದಾಯಿಸಿದ್ದರೆ ವಿವರ ಸಲ್ಲಿಸಿ, ಇಲ್ಲದಿದ್ದರೆ ಅರ್ಜಿ ಭರ್ತಿ ಮಾಡಿ. ನಂತರ PMKSY ಪೋರ್ಟಲ್ಗೆ ಲಾಗಿನ್ ಆಗಿ, ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆ ಅಪ್ಲೋಡ್ ಮಾಡಿ. ಸಲ್ಲಿಸಿದ ಅರ್ಜಿಗಳನ್ನು ತಾಂತ್ರಿಕ ಸಮಿತಿ ಮೌಲ್ಯಮಾಪನ ಮಾಡುತ್ತದೆ, ನಂತರ ಅನುದಾನ ಮ೦ಜೂರಾಗುತ್ತದೆ. ಖುದ್ದಾಗಿ ಅರ್ಜಿ ಸಲ್ಲಿಸಲು, ಸ್ಥಳೀಯ ಕೃಷಿ ಕಚೇರಿ ಸಂಪರ್ಕಿಸಿ.




