ಬುಧವಾರದ ದಿನ ಭವಿಷ್ಯ (Wednesday Astrology): ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಕ್ಕೂ ಅದರದ್ದೇ ಆದ ಮಹತ್ವವಿದ್ದು, ಬುಧವಾರವನ್ನು ವಿಘ್ನನಿವಾರಕ ಗಣೇಶ ಹಾಗೂ ಬುಧ ಗ್ರಹಕ್ಕೆ ಸಮರ್ಪಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಬುಧ ದೋಷವಿದ್ದರೆ ಅನಾರೋಗ್ಯ ಕಾಡುತ್ತದೆ.
ಹೌದು, ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಹೊಂದಿ, ಉತ್ತಮ ಆರೋಗ್ಯ ಪಡೆಯಲು ಬುಧವಾರದಂದು ಯಾವ ಕೆಲಸಗಳನ್ನು ಮಾಡಬೇಕು ಹಾಗೂ ಯಾವುದನ್ನು ಮಾಡಬಾರದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಉತ್ತಮ ಆರೋಗ್ಯಕ್ಕಾಗಿ ಬುಧವಾರ ಮಾಡಬೇಕಾದ ಶುಭ ಕೆಲಸಗಳು:

ಹಸಿರು ವಸ್ತ್ರದಾನ: ಬುಧವಾರದಂದು ತೃತೀಯಲಿಂಗಿಗಳಿಗೆ ಹಸಿರು ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠವಾಗಿದ್ದು, ಇದರಿಂದ ಬುಧ ಭಗವಂತನು ಪ್ರಸನ್ನನಾಗುತ್ತಾನೆ ಮತ್ತು ದೈಹಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.
ಹೆಸರುಬೇಳೆ ದಾನ: ನೀವು ಅಥವಾ ನಿಮ್ಮ ಕುಟುಂಬದವರು ದೀರ್ಘಕಾಲದ ರೋಗದಿಂದ ಬಳಲುತ್ತಿದ್ದರೆ, ಬುಧವಾರದಂದು ನಿರ್ಗತಿಕರಿಗೆ ಅಥವಾ ದೇವಸ್ಥಾನಕ್ಕೆ ‘ಹೆಸರುಬೇಳೆ’ (Green Gram) ದಾನ ಮಾಡುವುದರಿಂದ ಕಾಯಿಲೆಗಳನ್ನು ಶೀಘ್ರವಾಗಿ ದೂರ ಮಾಡುತ್ತದೆ.
ಗೋಮಾತೆಗೆ ಗ್ರಾಸ: ಇನ್ನು, ಮುಕ್ಕೋಟಿ ದೇವತೆಗಳು ನೆಲೆಸಿರುವ ಗೋಮಾತೆಗೆ (ಹಸು) ಬುಧವಾರ ಆಹಾರ ನೀಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗಿ, ದೇವತೆಗಳ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ.
ಗಣೇಶನಿಗೆ ಮೋದಕ ನೈವೇದ್ಯ: ಅಷ್ಟೇ ಅಲ್ಲ, ಜಾತಕದಲ್ಲಿರುವ ಬುಧ ದೋಷ ನಿವಾರಣೆಗೆ ಬುಧವಾರ ಗಣೇಶನನ್ನು ಭಕ್ತಿಯಿಂದ ಪೂಜಿಸಿ, ಮೋದಕವನ್ನು ನೈವೇದ್ಯವಾಗಿ ಅರ್ಪಿಸಿ.
ಚರ್ಮರೋಗಕ್ಕೆ ಪರಿಹಾರ: ನೀವು ಯಾವುದಾದರೂ ಗಂಭೀರವಾದ ಚರ್ಮ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಸತತ 7 ಬುಧವಾರಗಳ ಕಾಲ ಉಪವಾಸ ವ್ರತ ಆಚರಿಸುವುದು ಒಳಿತು.
ಬುಧವಾರ ಮರೆತೂ ಮಾಡಬಾರದ ತಪ್ಪುಗಳಿವು:
ಗ್ರಹಗಳ ಅಶುಭ ಪ್ರಭಾವದಿಂದ ಪಾರಾಗಲು ಬುಧವಾರ ಈ ಕೆಳಗಿನ ಕೆಲಸಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು:
ಹಣಕಾಸಿನ ವಹಿವಾಟು ಬೇಡ: ಬುಧವಾರ ಯಾರಿಗೂ ಸಾಲ ಕೊಡುವುದು ಅಥವಾ ಸಾಲ ಪಡೆಯುವುದನ್ನು ಮಾಡಬಾರದು.
ಮಾತಿನ ಮೇಲೆ ಹಿಡಿತವಿರಲಿ: ಈ ದಿನ ಯಾರೊಂದಿಗೂ ಕಟುವಾಗಿ ಅಥವಾ ನಿಂದನೆಯ ಮಾತುಗಳನ್ನು ಆಡಬಾರದು.
ಕಪ್ಪು ಬಟ್ಟೆ ನಿಷಿದ್ಧ: ಬುಧವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ಆದಷ್ಟು ತಪ್ಪಿಸಬೇಕು
ಪ್ರಯಾಣದಲ್ಲಿ ಎಚ್ಚರ: ಈ ದಿನ ಪಶ್ಚಿಮ ದಿಕ್ಕಿನ ಕಡೆಗೆ ಪ್ರಯಾಣ ಬೆಳೆಸುವುದು ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.




