ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭಾನುವಾರದಿಂದ ಮಂಗಳವಾರದವರೆಗೆ ವರುಣನ ಆರ್ಭಟ ಇರಲಿದ್ದು, ಗುಡುಗು ಸಹಿತ ಭಾರೀ ವರ್ಷಧಾರೆಯಾಗಲಿದೆ ಎಂದು ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅ.10ರ ಬೆ.8.30ರವರೆಗೆ ಭಾರೀ ಮಳೆಯಾಗಲಿದ್ದು, ನಂತರ ರಾಯಚೂರು, ಚಿತ್ರದುರ್ಗ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂಜಾನೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಮತ್ತೆ ಸಂಜೆಯಷ್ಟೊತ್ತಿಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಪ್ರಮುಖ ನಗರಗಳ ತಾಪಮಾನ:
ಬೆಂಗಳೂರು: 28-20, ಮಂಗಳೂರು: 29-23, ಶಿವಮೊಗ್ಗ: 30-19, ಬೆಳಗಾವಿ: 27-18, ಮೈಸೂರು: 31-20, ಮಂಡ್ಯ: 30-21, ಮಡಿಕೇರಿ: 26-16, ರಾಮನಗರ: 29-21, ಹಾಸನ: 28-18, ಚಾಮರಾಜನಗರ: 30-20, ಚಿಕ್ಕಬಳ್ಳಾಪುರ: 27-19, ಕೋಲಾರ: 28-20, ತುಮಕೂರು: 28-19, ಉಡುಪಿ: 29-23, ಕಾರವಾರ: 29-24, ಚಿಕ್ಕಮಗಳೂರು: 27-17, ದಾವಣಗೆರೆ: 29-20, ಯಾದಗಿರಿ: 30-23, ವಿಜಯಪುರ: 29-21, ಬೀದರ್: 28-21, ಕಲಬುರಗಿ: 29-22, ಬಾಗಲಕೋಟೆ: 31-21 ಡಿಗ್ರಿ ಸೆಲ್ಸಿಯಸ್ ಇರಲಿದೆ.