ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮೋಡಗಳು ಮುಸುಕಿದ ಪರಿಣಾಮ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸರಾಸರಿ 5-6 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದ್ದು, ವಾರದಿಂದ ಕರಾವಳಿ, ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೋರಾಗಿ ಮಳೆಯಾಗುತ್ತಿದೆ. ಇದರಿಂದ ಬೆಳಗ್ಗೆ ಮತ್ತು ರಾತ್ರಿ ಅವಧಿಯಲ್ಲಿ ಜನರಿಗೆ ಮಳೆ ಜತೆಗೆ ಚಳಿ ಅನುಭವವಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿಯೂ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ.
ಅರಬ್ಬಿ ಸಮುದ್ರದಿಂದ ರಾಜ್ಯದ ಕಡೆಗೆ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಅನುಭವ ಇದ್ದು, ಮಳೆಗಾಲದ ವೇಳೆ ಹವಾಮಾನದಲ್ಲಿ ಸಾಮಾನ್ಯವಾಗಿ ಇವೆಲ್ಲಾ ಏರುಪೇರು ಆಗುವುದು ಸಾಮಾನ್ಯ ಎಂದು ಹವಾಮಾನ ವೈಪರೀತ್ಯ ವಿಜ್ಞಾನಿ ಡಾ.ಎಂ.ಬಿ.ರಾಜೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ಭಾಗಮಂಡಲ 14 ಸೆಂಮೀ, ನಾಪೊಕ್ಲು 13 ಸೆಂಮೀ, ಬಬಲೇಶ್ವರ 13 ಸೆಂಮೀ, ಮಂಗಳೂರು 11 ಸೆಂಮೀ, ದೇವರಹಿಪ್ಪರಗಿ 10 ಸೆಂಮೀ ಮತ್ತು ಸುಬ್ರಹ್ಮಣ್ಯ 9 ಸೆಂಮೀ ಮಳೆ ಬಿದ್ದಿದೆ.
ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಘೋಷಣೆ:
ಇನ್ನು, ರಾಜಧಾನಿ ಸೇರಿದಂತೆ ಹಲವು ಕಡೆ ನಿರತರವಾಗಿ ಮಳೆ ಸುರಿಯುತ್ತಿದೆ. ರಾಜ್ಯದಲ್ಲಿ ಮುಂದಿನ 3 ದಿನ ಮಳೆಯ ಅಬ್ಬರ ಮುಂದುವರೆಯುವ ಸಾಧ್ಯತೆಯಿದ್ದು, ಕೊಡಗು ಜಿಲ್ಲೆ ಸೇರಿದಂತೆ ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಇರಲಿದೆ ಎಂದು ತಿಳಿಸಿದೆ.
ವಿವಿಧ ನಗರಗಳ ತಾಪಮಾನ:
ಬೆಂಗಳೂರು: 24-20
ಮಂಗಳೂರು: 27-24
ಶಿವಮೊಗ್ಗ: 25-21
ಬೆಳಗಾವಿ: 23-21
ಮೈಸೂರು: 25-21
ಮಂಡ್ಯ: 26-21
ಕೋಲಾರ: 26-21
ತುಮಕೂರು: 25-21
ಉಡುಪಿ: 27-24
ಚಿಕ್ಕಮಗಳೂರು: 22-18
ದಾವಣಗೆರೆ: 26-22
ಕೊಡಗು: 20-18
ರಾಮನಗರ: 26-21
ಹಾಸನ: 23-19
ಚಾಮರಾಜನಗರ: 26-21
ಚಿಕ್ಕಬಳ್ಳಾಪುರ: 26-20
ಚಿತ್ರದುರ್ಗ: 26-21
ಹಾವೇರಿ: 26-22
ಬಳ್ಳಾರಿ: 29-23
ಗದಗ: 26-21
ಕೊಪ್ಪಳ: 28-22
ರಾಯಚೂರು: 29-23
ಯಾದಗಿರಿ: 29-23
ವಿಜಯಪುರ: 27-22
ಬೀದರ್: 27-21
ಕಲಬುರಗಿ: 28-22
ಬಾಗಲಕೋಟೆ: 28-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.