ರಾಜ್ಯದಲ್ಲಿ ಇಳಿಮುಖವಾಗಿದ್ದ ಮಳೆರಾಯ ಮತ್ತೆ ಚುರುಕು ಪಡೆಯಲಿದ್ದು, ರಾಜ್ಯದ ದಕ್ಷಿಣ, ಉತ್ತರ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 25 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇನ್ನು, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೀದರ್, ಚಿತ್ರದುರ್ಗ, ಧಾರವಾಡ. ಗದಗ, ಗೋಕರ್ಣ, ಹಂಪಿ, ಹಾಸನ, ಹೊನ್ನಾವರ, ಕಲಬುರ್ಗಿ, ಕಾರವಾರ, ಮಡಿಕೇರಿ, ಮಂಡ್ಯ, ಮೈಸೂರು, ಮಂಗಳೂರು, ರಾಯಚೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗ್ಗೆಯಿಂದಲೇ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖ ಜಿಲ್ಲೆಗಳ ತಾಪಮಾನ:
ಬೆಂಗಳೂರು: 28-19, ಕಾರವಾರ: 28-25, ಚಿತ್ರದುರ್ಗ: 29-21, ಹಾವೇರಿ: 29-21,ಮಂಗಳೂರು: 28-24, ಕೋಲಾರ: 29-21, ತುಮಕೂರು: 28-20, ಉಡುಪಿ: 28-24, ಬಳ್ಳಾರಿ: 33-23, ಗದಗ: 29-21, ಕೊಪ್ಪಳ: 32-22 , ರಾಯಚೂರು: 33-24, ಚಿಕ್ಕಮಗಳೂರು: 25-18, ದಾವಣಗೆರೆ: 29-21,ಶಿವಮೊಗ್ಗ: 28-21, ಯಾದಗಿರಿ: 33-23, ವಿಜಯಪುರ: 31-22, ಬೀದರ್: 29-22, ಕಲಬುರಗಿ: 32-23, ಬಾಗಲಕೋಟೆ: 32-22, ಕೊಡಗು: 23-18, ರಾಮನಗರ: 29-21, ಹಾಸನ: 27-19, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ: 29-19, ಬೆಳಗಾವಿ: 26-20, ಮೈಸೂರು: 28-20, ಮಂಡ್ಯ: 29-21ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.