ಸೀತಾಫಲ ಹಣ್ಣಿನ ಎಲೆಯನ್ನು ಅಥವಾ ತೊಗಟೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಮತ್ತು ಹೇನುಗಳ ಸಮಸ್ಯೆ ದೂರವಾಗುವುದಲ್ಲದೆ, ಇದನ್ನು ಗಾಯದ ಮೇಲೆ ಹಚ್ಚುವುದರಿಂದ ನೋವು ಮತ್ತು ಗಾಯ ಕೂಡ ಬೇಗನೆ ಗುಣವಾಗುತ್ತದೆ.
ಸೀತಾಫಲ ರಸಕ್ಕೆ ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆ ನೋವು ಹಾಗೂ ಹೊಟ್ಟೆಉರಿ ಕಡಿಮೆಯಾಗುವುದಲ್ಲದೆ, ಋತು ಸ್ರಾವದಲ್ಲಿ ಹೆಣ್ಣು ಮಕ್ಕಳು ಈ ಹಣ್ಣನ್ನು ತಿನ್ನುವುದರಿಂದ ಹೊಟ್ಟೆ ನೋವು, ಸೊಂಟ ನೋವು ಮತ್ತು ಇನ್ನಿತರ ಸಮಸ್ಯೆಗಳು ಕೂಡ ದೂರ ಆಗುತ್ತದೆ.
ಇನ್ನು, ಸೀತಾಫಲ ಹಣ್ಣಿನ ತೊಗಟೆಯನ್ನು ಉಪಯೋಗಿಸಿ ಮಾಡುವ ಕಷಾಯವನ್ನು ಸೇವನೆ ಮಾಡುವುದರಿಂದ ಬೇಧಿ ಮತ್ತು ಆಮಶಂಕೆಯಂತಹ ಸಮಸ್ಯೆಗಳು ಕೂಡ ಕಡಿಮೆ ಆಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




