ಮೈಸೂರು : ಮಂಡ್ಯ ಜಿಲ್ಲೆಯ ಹಾಲಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರ್ಪಡೆಯ ಬಗ್ಗೆ ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ಮೈಸೂರಿನಲ್ಲಿ ಮಾತನಾಡಿರುವ ಶಾಸಕ ಸಿಎಸ್ ಪುಟ್ಟರಾಜು ಅವರು, ಮಂಡ್ಯ ಜಿಲ್ಲೆಯ ಹಾಲಿ ಸಂಸದೆ ಸುಮಲತಾ ನಾಳೆ ಬಿಜೆಪಿ ಸೇರುವುದು ಖಚಿತ. ಮಂಡ್ಯದಲ್ಲಿ ಮಾರ್ಚ್ 12 ರಂದು ನಡೆಯುವ ಮೋದಿ ಕಾರ್ಯಕ್ರಮದ ವೇಳೆ ಸುಮಲತಾ ಬಿಜೆಪಿಗೆ ಎಂಟ್ರಿ ಕೊಡಬೇಕು ಅನ್ನುವ ಪ್ಲಾನ್ ಮಾಡಿದ್ದರು. ಆದರೆ ಅಂದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ನಾಳೆ (ಶುಕ್ರವಾರ) ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.