ವಿಜಯಪುರ: ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದು ಖಚಿತ. ಅಲ್ಲಿ ಹಿಂದೂ ವರ್ಸಸ್ ಸಾಬರು ಎಂದಿದೆ. ಪಂಚಮಸಾಲಿ ಎಎನ್ನುವುದನ್ನು ಬಿಡೋದು ಹಿಂದೂ ಬಚೇಗಾತೋ ಹಮ್ ಬಚೇಗಾ ಎನ್ನೋದು. ಇಲ್ಲವಾದರೆ ಯಾವ ರೆಡ್ಡಿ, ಪಂಚಮಸಾಲಿ, ಗಾಣಿಗ, ದಲಿತರು ಯಾರೂ ಉಳಿಯುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ರಾಜ್ಯದ ಮೂರು ಕ್ಷೇತ್ರಗಳ ಚುನಾವಣೆ ವಿಚಾರವಾಗಿ ಮಾತಾನಾಡಿದ ಅವರು, ಈಗಾ ವಕ್ಪ್ ವಿಚಾರ ನೋಡುತ್ತಿದ್ದೀರಲ್ಲಾ. ನಾವು (ಹಿಂದೂಗಳು) ಜಗಳವಾಡುತ್ತಾ ಹೋದರೆ ಸಬ್ ಹಮಾರಾ ಹೈ ಎನ್ನುತ್ತಾರೆ ಎಂದು ಎಚ್ಚರಿಸಿದರು.
ಯಾವೋ ಒಬ್ಬ ಮುಲ್ಲಾ ನಾಲ್ಕೈದು ರಾಜ್ಯದಲ್ಲಿ ಮುಸ್ಲಿಂಮರು ಬಹುಸಂಖ್ಯಾರಾಗಿದ್ದೇವೆ ಹಿಂದೂಗಳು ಖಾಲಿ ಮಾಡಿ ಎಂದಿದ್ದಾನೆ. ಆತನ ಮೇಲೆ 17 ಕ್ರಿಮಿನಲ್ ಕೇಸ್ ಇವೆ. ಹೀಗೆ ಆದರೆ ಬಾಂಗ್ಲಾದಲ್ಲಿ ಆದಂತೆ ಆಗುತ್ತದೆ. ಹಾಗಾಗಿ ನಾವು ಜಾತಿ ಬೇಧ ಭಾವ ಬಿಟ್ಟು ಒಂದಾಗಬೇಕು. ಈಗಾ ಜಾತಿ ಹೋಗಿದೆ ಕೇವಲ ಹಿಂದೂ ಎಂದಾಗಿದೆ ಎಂದು ಹೇಳಿದ್ದಾರೆ.
ಕೈಗೆ ಯಾರು ಹೋಗಲ್ಲ:
ಬಿಜೆಪಿಯ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ವಿಚಾರವಾಗಿ ಮಾತಾನಾಡಿ, ಯಾರೂ ಹೋಗಲ್ಲಾ ಬಿಜೆಪಿಯವರಿಗೆ ಹುಚ್ಚು ಹಿಡಿದಿದೆಯಾ?. ಸುಮ್ಮನೇ ಹಾಗೇ ಹೇಳುತ್ತಾರೆ. ಕಾಂಗ್ರೆಸ್ ನವರು ಹೇಳಿದ ಬಳಿಕ ಬಿಜೆಪಿಯವರು ಸಹ ಕಾಂಗ್ರೆಸ್ಸಿನ 20 ಶಾಸಕರು ನಮ್ಮ ಕಡೆ ಬರುತ್ತಾರೆಂದು ಹೇಳುತ್ತಾರೆ. ಅವರೂ ಬರಲ್ಲಾ ಇವರೂ ಬರಲ್ಲಾ ಎಂದು ಹೇಳಿದ್ದಾರೆ.