IND vs BAN: ಹೈದರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ T20ಯಲ್ಲಿ ಭಾರತ 133 ರನ್ ಗಳ ಭರ್ಜರಿ ಗೆಲುವು ಸಾಧಿಸಿದ್ದು, ಇದರಿಂದ ಸರಣಿಯನ್ನು ಸಂಪೂರ್ಣ ಕ್ಲೀನ್ ಸ್ವೀಪ್ ಮಾಡಿದೆ.
ಹೌದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಡಿಯಾ ಸಂಜು ಸ್ಯಾಮ್ಸನ್ ಭರ್ಜರಿ ಶತಕ, ಸೂರ್ಯ ಕುಮಾರ್ ಯಾದವ್ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 297 ರನ್ ಗಳ ಬೃಹತ್ ಮೊತ್ತ ಗಳಿಸಿತು. ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 111, ಸೂರ್ಯ ಕುಮಾರ್ ಯಾದವ್ 75, ಹಾರ್ದಿಕ್ ಪಾಂಡ್ಯ 47 ಹಾಗೂ ರಿಯನ್ ಪರಾಗ್ 34ರನ್ ಗಳಿಸಿ ತಂಡದ ಸ್ಕೊರ್ ಹೆಚ್ಚಿಸಲು ನೆರೆವಾದರು. ಬಾಂಗ್ಲಾ ಪರ ತಂಜಿಮ್ ಹಸನ್ ಸಾಕಿಬ್ 3, ಮುಸ್ತಫಿಜುರ್ ಹಾಗು ಮಹಮ್ಮದುಲ್ಲಾ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: Ratan Tata : ರತನ್ ಟಾಟಾ ಪ್ರೀತಿಸಿದ್ದರೂ ಬ್ಯಾಚುರಲ್ ಆಗಿ ಉಳಿದಿದ್ದು ಯಾಕೆ? ಮದುವೆಯಾಗದೆ ಇರಲು ಇದೇ ಕಾರಣ?
ಇನ್ನು, ಟೀಮ್ ಇಂಡಿಯಾ ನೀಡಿದ 298 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿ 133 ರನ್ ಗಳ ಅಂತರದಿಂದ ಸೋಲು ಕಂಡಿತು. ಬಾಂಗ್ಲಾ ಪರ ತಂಜಿದ್ ಹಸನ್ 15, ನಜ್ಮುಲ್ ಹೊಸೈನ್ ಶಾಂತೋ 14, ಲಿಟನ್ ದಾಸ್ 42, ತೌಹಿದ್ ಹೃದಯ್ 63 ರನ್ ಗಳಿಸಿದರು. ಟೀಮ್ ಇಂಡಿಯಾ ಪರ ರವಿ ಬಿಷ್ಣೋಯ್ 3, ಮಯಾಂಕ್ ಯಾದವ್ 2, ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್ ರೆಡ್ಡಿ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರೂ.
ಇನ್ನು, ಟೀಮ್ ಇಂಡಿಯಾ ಪರ ಭರ್ಜರಿ ಶತಕ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಸಂಜು ಸ್ಯಾಮ್ಸನ್ ಪಂದ್ಯ ಪುರೋಷೋತ್ತಮ ಪ್ರಶಸ್ತಿಗೆ ಪಡೆದುಕೊಂಡರೆ, ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ಆಲ್ರೌಂಡರ್ ಹಾರ್ದಿಕ್ ಪಂದ್ಯ ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.