ರಾಷ್ಟ್ರಪತಿ ಪದಕ ಗೆದ್ದ ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿಗಳ ಪದಕಕ್ಕೆ ಕರ್ನಾಟಕದ ಇಬ್ಬರು ಉಪ ಪೊಲೀಸ್ ಮಹಾ ನಿರೀಕ್ಷಕರು (ಡಿಐಜಿಪಿ) ಸೇರಿದಂತೆ ಇಪ್ಪತ್ತೊಂದು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಡಿಐಜಿಪಿ ಬಸವರಾಜ್ ಶರಣಪ್ಪ…

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿಗಳ ಪದಕಕ್ಕೆ ಕರ್ನಾಟಕದ ಇಬ್ಬರು ಉಪ ಪೊಲೀಸ್ ಮಹಾ ನಿರೀಕ್ಷಕರು (ಡಿಐಜಿಪಿ) ಸೇರಿದಂತೆ ಇಪ್ಪತ್ತೊಂದು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಡಿಐಜಿಪಿ ಬಸವರಾಜ್ ಶರಣಪ್ಪ ಜಿಲ್ಲೆ ಮತ್ತು ಕೆಎಸ್ಆರ್ಪಿ 12ನೇ ಬೆಟಾಲಿಯನ್ನ ಕಮಾಂಡೆಂಟ್ ಹಂಜಾ ಹುಸೇನ್ ಅವರಿಗೆ ರಾಷ್ಟ್ರಪತಿಗಳ ಪದಕ ನೀಡಿ ಗೌರವಿಸಲಾಯಿತು.

ಡಿಐಜಿಪಿ ರೇಣುಕಾ ಕೆ. ಸುಕುಮಾರ್ ಮತ್ತು ಎಐಜಿಪಿ ಸಂಜೀವ್ ಎಂ. ಪಾಟೀಲ್ ಅವರಿಗೆ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ.

Vijayaprabha Mobile App free

ಬಿ. ಎಂ. ಪ್ರಸಾದ್, ವೀರೇಂದ್ರ ನಾಯಕ್ ಎನ್, ಗೋಪಾಲ್ ಡಿ ಜೋಗಿನ್, ಗೋಪಾಲಕೃಷ್ಣ ಬಿ ಗೌಡಾರ್, ಎಚ್ ಗುರುಬಸವರಾಜ್, ಜಯರಾಜ್ ಎಚ್, ಪ್ರದೀಪ್ ಬಿ ಆರ್, ಮೊಹಮ್ಮದ್ ಮುಕರ್ರಮ್, ವಸಂತ ಕುಮಾರ ಎಂ ಎ, ಮಂಜುನಾಥ ವಿ ಜಿ, ಅಲ್ತಾಫ್ ಹುಸೇನ್ ಎನ್ ಧಕನಿ, ಬಾಲೇಂದ್ರನ್ ಸಿ, ಅರುಣ್ ಕುಮಾರ್, ನಯಾಜ್ ಅಂಜುಮ್, ಶ್ರೀನಿವಾಸ ಎಂ, ಅಶ್ರಫ್ ಪಿ ಎಂ ಮತ್ತು ಶಿವಾನಂದ ಬಿ. ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.