Aadhaar card ಹೊಂದಿರುವವರಿಗೆ ಎಚ್ಚರಿಕೆ; ಇಂತಹ ಆಧಾರ್ ಕಾರ್ಡ್ ರದ್ದು, ಕೇಂದ್ರದ ಪ್ರಮುಖ ನಿರ್ಧಾರ!

Vijayaprabha

Aadhaar card: ಆಧಾರ್ ಕಾರ್ಡ್..ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ಅಂಶವಾಗಿದೆ. ಯಾವುದೇ ಸಣ್ಣ ಕೆಲಸಕ್ಕೂ ಆಧಾರ್ (Aadhaar card) ತೋರಿಸಬೇಕು. ಪಡಿತರ ಚೀಟಿಯಿಂದ (Ration Card) ಆದಾಯ ತೆರಿಗೆ ರಿಟರ್ನ್ಸ್‌ವರೆಗೆ (Income Tax Returns) ಎಲ್ಲಾ ಹಣಕಾಸು ವಹಿವಾಟುಗಳಿಗೆ ಇದು ಕಡ್ಡಾಯವಾಗಿದ್ದು, ಸರ್ಕಾರದ ಯೋಜನೆಗಳನ್ನು ಪಡೆಯಲು ಸಹ ನೀವು ಆಧಾರ್ ಹೊಂದಿರಬೇಕು.

ಇದನ್ನು ಓದಿ: SBI ಆಶಾ ಸ್ಕಾಲರ್ಶಿಪ್ ಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ, 50,000 ವಿದ್ಯಾರ್ಥಿ ವೇತನ, ಈಗಲೇ ಅರ್ಜಿ ಸಲ್ಲಿಸಿ

ಆದರೆ, ಆಧಾರ್ ಕಾರ್ಡ್ (Aadhar card) ಹೊಂದಿರುವವರು ಸತ್ತರೆ ಅವರ ಆಧಾರ್ ದುರ್ಬಳಕೆಯಾಗುವ ಸಾಧ್ಯತೆಗಳಿವೆ. ಅಂತಹವರ ಆಧಾರ್ ಕಾರ್ಡ್ ಸ್ವಯಂಚಾಲಿತವಾಗಿ ರದ್ದಾಗುವಂಥ ಹೊಸ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂಬ ವರದಿಗಳು ಇತ್ತೀಚೆಗೆ ಬಂದಿವೆ. ಸತ್ತವರ ಆಧಾರ್ ಕಾರ್ಡ್ ರದ್ದು (Aadhaar card cancellation of deceased) ಮಾಡುವುದರಿಂದ ಆ ಕಾರ್ಡ್ ಗಳ ಮೇಲಿನ ಎಲ್ಲಾ ಯೋಜನೆಗಳು ನಿಲ್ಲುತ್ತವೆ ಎಂಬುದು ಸುದ್ದಿಯ ಸಾರಾಂಶ. ಆದರೆ ಇತ್ತೀಚೆಗಷ್ಟೇ ಈ ಸುದ್ದಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಸ್ಪಷ್ಟನೆ ನೀಡಿದೆ.

ಇದನ್ನು ಓದಿ: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ; ಜೂನ್ 14 ಕೊನೆಯ ದಿನ, ಬೇಗನೆ ಈ ಕೆಲಸ ಮಾಡಿ!

ಸತ್ತವರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ (Aadhaar card cancellation of deceased) ಮಾರ್ಗಗಳ ಕುರಿತು ಕೇಂದ್ರ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಆದರೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಮೂಲಗಳು ಈವರೆಗೆ ಅಂತಹ ಯಾವುದೇ ನೀತಿ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ. ಪ್ರಸ್ತುತ, ರಾಜ್ಯ ಸರ್ಕಾರಗಳು ನೇಮಿಸಿದ ರಿಜಿಸ್ಟ್ರಾರ್‌ಗಳಿಂದ ಸತ್ತ ವ್ಯಕ್ತಿಗಳ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲು ಯಾವುದೇ ಕಾರ್ಯವಿಧಾನ ಲಭ್ಯವಿಲ್ಲ ಎಂದು ತಿಳಿಸಿದೆ.

ಇದನ್ನು ಓದಿ: Krishi Ashirwad Yojana: ರೈತರಿಗೆ ಪ್ರತಿ ಎಕರೆಗೆ 5000 ಸಹಾಯಧನ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

ಆದರೆ, ಭಾರತೀಯ ರಿಜಿಸ್ಟ್ರಾರ್ ಜನರಲ್ ಅವರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದ್ದು, ಜನನ ಮತ್ತು ಮರಣ ನೋಂದಣಿ ಕಾಯಿದೆ, 1969 ರ ಕರಡು ತಿದ್ದುಪಡಿಗಳಲ್ಲಿ ಮರಣ ಪ್ರಮಾಣ ಪತ್ರ (Death Certificate) ನೀಡುವ ಸಮಯದಲ್ಲಿಯೇ ಆಧಾರ್ ಕಾರ್ಡ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಅದರ ನಂತರ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೆ, ಈ ವಿಷಯದ ಬಗ್ಗೆ ಇನ್ನೂ ಏನೂ ಹೊರಬಂದಿಲ್ಲ.

ಇದನ್ನು ಓದಿ: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್:‌ ಈ ಯೋಜನೆಯಡಿ ಪ್ರತಿಯೊಬ್ಬರಿಗೂ 50 ಸಾವಿರ ಉಚಿತ, ಕೂಡಲೇ ಅರ್ಜಿ ಸಲ್ಲಿಸಿ!

ಜನನ ಮತ್ತು ಮರಣಗಳ ನೋಂದಣಿ ಕಾಯಿದೆ (Registration of Births and Deaths Act) 1969 ರ ಅಡಿಯಲ್ಲಿ, ರಾಜ್ಯ ಸರ್ಕಾರಗಳು ನೇಮಿಸಿದ ರಿಜಿಸ್ಟ್ರಾರ್‌ಗಳು ಸ್ಥಳೀಯ ಜನನ ಮತ್ತು ಮರಣಗಳನ್ನು ನೋಂದಾಯಿಸುತ್ತಾರೆ. ಇದನ್ನು ಆಧರಿಸಿ ಸತ್ತವರ ಆಧಾರ್ ಕಾರ್ಡ್ ರದ್ದು ಮಾಡಲಾಗುವುದು ಎಂಬ ಸುದ್ದಿ ಕೆಲ ದಿನಗಳ ಹಿಂದೆ ಇತ್ತು. ಇದು ಕಾರ್ಡ್ ಮೂಲಕ ಪಡೆಯುವ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ. ಇತರೆ ಹಣಕಾಸು ವಿಚಾರಗಳಲ್ಲಿ ಆಧಾರ್ ಕಾರ್ಡ್ ದುರುಪಯೋಗವಾಗುವುದನ್ನು ತಡೆಯುವುದು ಪ್ರಸ್ತಾವನೆಯಾಗಿದೆ. ಆದರೆ, ಇನ್ನೂ ಯಾವುದೇ ನೀತಿ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿರುವುದು ಗಮನಾರ್ಹ.

ಇದನ್ನು ಓದಿ: Sukanya Samriddhi Yojana: ಹೀಗೆ ಮಾಡಿದ್ರೆ ನಿಮ್ಮ ಕೈಗೆ ಸಿಗಲಿದೆ ಬರೋಬ್ಬರಿ 64 ಲಕ್ಷ ರೂ!

ಮತ್ತೊಂದೆಡೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಜನನ ಪ್ರಮಾಣಪತ್ರವನ್ನು (Birth Certificate) ನೀಡುವ ಸಮಯದಲ್ಲಿಯೇ ಆಧಾರ್ ಸಂಖ್ಯೆಯನ್ನು ನಿಗದಿಪಡಿಸುವ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ದೇಶದ 20 ರಾಜ್ಯಗಳಲ್ಲಿ ಈ ನೀತಿ ಜಾರಿಯಾಗುತ್ತಿದ್ದು, ಶೀಘ್ರದಲ್ಲೇ ಇತರೆ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಯುಐಡಿಎಐ ತಿಳಿಸಿದೆ. ಇನ್ನು, 10 ವರ್ಷಗಳ ಹಳೆ ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ಉಚಿತವಾಗಿ ನವೀಕರಿಸುವುದಕ್ಕೆ ಮೂರು ತಿಂಗಳ ಅವಧಿಯನ್ನು ನೀಡಿದೆ.

ಇದನ್ನು ಓದಿ: ಇನ್ಮುಂದೆ ಯುಪಿಐ ಮೂಲಕವೂ ಸಿಗಲಿದೆ ಸಾಲ; ಗೂಗಲ್‌ ಪೇ, ಫೋನ್‌ಪೇ ಮೂಲಕ ಸಾಲ ಹೇಗೆ?

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version