ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಕಳಂಕ ತಪ್ಪಿದ್ದಲ್ಲ; ದೋಷ ಪರಿಹಾರಕ್ಕೆ ಹೀಗೆ ಮಾಡಿ!

Ganesha Chaturthi: ಒಮ್ಮೆ ಗಣೇಶನು ಚಂದ್ರಲೋಕದಿಂದ ಲಡ್ಡುಗಳೊಂದಿಗೆ ಬರುತ್ತಿದ್ದಾಗ, ದಾರಿಯಲ್ಲಿ ಚಂದ್ರದೇವ ಕಂಡರು. ಗಣೇಶನ ಕೈಯಲ್ಲಿರುವ ಲಡ್ಡುಗಳು ಮತ್ತ ಗಣಪನ ದೊಡ್ಡ ಹೊಟ್ಟೆಯನ್ನು ನೋಡಿ ಚಂದ್ರ ದೇವನು ನಗಲು ಆರಂಭಿಸಿದನು. ಇದರಿಂದ ಕೋಪಗೊಂಡ ಗಣಪತಿಯು…

Ganesha Chaturthi vijayaprabhanews

Ganesha Chaturthi: ಒಮ್ಮೆ ಗಣೇಶನು ಚಂದ್ರಲೋಕದಿಂದ ಲಡ್ಡುಗಳೊಂದಿಗೆ ಬರುತ್ತಿದ್ದಾಗ, ದಾರಿಯಲ್ಲಿ ಚಂದ್ರದೇವ ಕಂಡರು. ಗಣೇಶನ ಕೈಯಲ್ಲಿರುವ ಲಡ್ಡುಗಳು ಮತ್ತ ಗಣಪನ ದೊಡ್ಡ ಹೊಟ್ಟೆಯನ್ನು ನೋಡಿ ಚಂದ್ರ ದೇವನು ನಗಲು ಆರಂಭಿಸಿದನು.

ಇದರಿಂದ ಕೋಪಗೊಂಡ ಗಣಪತಿಯು ಚಂದ್ರ ದೇವನನ್ನು ಶಪಿಸಿದನು. ಚಂದ್ರದೇವ ತನ್ನನ್ನು ನೋಡಿ ನಗುತ್ತಿರುವುದನ್ನು ಕಂಡ ಗಣೇಶನು ಕೋಪಗೊಂಡು ಚಂದ್ರದೇವನು ಕ್ಷೀಣಿಸುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ. ಅಂದಿನಿಂದ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಕಳಂಕ ಬರುತ್ತದೆ ಎಂದು ನಂಬಲಾಗಿದೆ.

ಚತುರ್ಥಿ ದಿನ ಚಂದ್ರನನ್ನು ನೋಡಿದರೆ ದೋಷ ಪರಿಹಾರಕ್ಕೆ ಹೀಗೆ ಮಾಡಿ!

ಚೌತಿಯ ದಿನದಂದು ಚಂದ್ರನನ್ನು ನೋಡಬಾರದು. ಏನಾದರೂ ಅಪ್ಪಿ ತಪ್ಪಿ ಚಂದ್ರನನ್ನು ನೋಡಿದರೆ ಸುಳ್ಳು ಅಪವಾದ ಬರುತ್ತದೆ ಎನ್ನಲಾಗಿದೆ. ಶ್ರೀ ಕೃಷ್ಣ ಕೂಡ ಚೌತಿಯ ಚಂದ್ರನನ್ನು ನೋಡಿ ಶಮಂತಕ ಮಣಿಯನ್ನು ಕದ್ದ ಆರೋಪ ಎದುರಿಸಿದ್ದ. ಹೀಗಾಗಿ ಇಂದಿಗೂ ಜನರು ಚೌತಿಯಂದು ಚಂದ್ರನ ದರ್ಶನ ಮಾಡಬಾರದು ಎನ್ನುತ್ತಾರೆ.

Vijayaprabha Mobile App free

ಒಂದುವೇಳೆ ಗಣಪತಿ ಹಬ್ಬದಂದು ಅಪ್ಪಿತಪ್ಪಿ ಚಂದ್ರನನ್ನು ನೋಡಿದರೆ ಕೃಷ್ಣ ಶಮಂತಕ ಮಣಿ ಕಥೆಯನ್ನು ಕೇಳಿದರೆ ಈ ಅಪವಾದ ಕಾಡುವುದಿಲ್ಲ. ಹೀಗಾಗಿ ಚಂದ್ರನನ್ನು ನೋಡಿದವರು ಈ ಕಥೆಯನ್ನು ಕೇಳುತ್ತಾರೆ.

https://vijayaprabha.com/why-do-they-offer-garike-grass-to-ganesha/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.