Heavy rain: ರಾಜ್ಯದ ಹಲವೆಡೆ ಭಾರೀ ಮಳೆ; ಏನಿದು ರೆಡ್‌, ಯೆಲ್ಲೋ, ಆರೆಂಜ್ ಅಲರ್ಟ್‌?

Heavy rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದ್ದು, ಕೊಡುಗು ಜಿಲ್ಲೆಯ ಹಲವೆಡೆ 20 ನಿಮಿಷ ಗುಡುಗಿನೊಂದಿಗೆ ಭಾರೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಸೇರಿದಂತೆ ಹಲವು ಭಾಗಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

Vijayaprabha

Heavy rain : ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದ್ದು, ಕೊಡುಗು ಜಿಲ್ಲೆಯ ಹಲವೆಡೆ 20 ನಿಮಿಷ ಗುಡುಗಿನೊಂದಿಗೆ ಭಾರೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಸೇರಿದಂತೆ ಹಲವು ಭಾಗಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

ಇದನ್ನು ಓದಿ: ದ್ವಿತೀಯ PUC ಫಲಿತಾಂಶ ಪ್ರಕಟ; ರಿಸಲ್ಟ್‌ ಈ ರೀತಿ ಚೆಕ್‌ ಮಾಡಿ..

ಇನ್ನು, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಸಂತೇಬೆನ್ನೂರು, ಮಲೆಬೆನ್ನೂರು, ಹೊನ್ನಾಳಿ, ಮಾಯಕೊಂಡದಲ್ಲಿ ಸಂಜೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪುರ ತಾಲೂಕುಗಳಲ್ಲಿ ವರುಣ ಅಬ್ಬರಿಸಿದ್ದು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸುತ್ತಮುತ್ತ ಮಳೆರಾಯ ತಂಪೆರೆದಿದ್ದಾನೆ.

Heavy rain in many parts of the state

Heavy rain: ಏನಿದು ರೆಡ್‌, ಯೆಲ್ಲೋ, ಆರೆಂಜ್ ಅಲರ್ಟ್‌?

ರೆಡ್‌ ಅಲರ್ಟ್‌: 24 ಗಂಟೆಯಲ್ಲಿ 70mm,6 ಗಂಟೆಯಲ್ಲಿ 40mmಗೂ ಅಧಿಕ ಮಳೆಯಾಗುವ ಸಾಧ್ಯತೆ ಇದ್ದರೆ ಈ ಅಲರ್ಟ್‌ ಘೋಷಿಸಲಾಗುತ್ತದೆ.

ಯೆಲ್ಲೋ ಅಲರ್ಟ್: ಪರಿಸ್ಥಿತಿ ಹದಗೆಡುವ ಸಾಧ್ಯತೆ, ಜನ ಹೊರಬರುವ ಮುನ್ನ ಯೋಚಿಸಬೇಕು. ಅಲ್ಲದೆ, ಆಡಳಿತ ಯಂತ್ರವು ಮಾಹಿತಿ ನವೀಕರಿಸುತ್ತಿರಬೇಕು.

ಆರೆಂಜ್ ಅಲರ್ಟ್: ಆಡಳಿತ ಯಂತ್ರಕ್ಕೆ ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಸೂಚಿಸುತ್ತದೆ.

ಗ್ರೀನ್ ಅಲರ್ಟ್: ಜನತೆ ಆರಾಮವಾಗಿ ಓಡಾಡಬಹುದು, ಯಾವುದೇ ಎಚ್ಚರಿಕೆಯಿಲ್ಲ ಎಂಬುದನ್ನು ಸೂಚಿಸುತ್ತದೆ.

ಇದನ್ನು ಓದಿ: ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಸ್ಟಾರ್ ದಂಪತಿ; ಧನುಷ್ & ಐಶ್ವರ್ಯಾ ದಾಂಪತ್ಯ ಜೀವನ ಅಂತ್ಯ..?

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version