BIGG BOSS Season 10ಕ್ಕೆ ಕೌಂಟ್‌ಡೌನ್‌; ಬಿಗ್‌ಬಾಸ್‌ ಮನೆಗೆ ʻಕಾಂತಾರʼ ನಟ? ಯಾರೆಲ್ಲಾ ಎಂಟ್ರಿ?

Vijayaprabha

BIGG BOSS Season 10: ಕನ್ನಡದ ಯಶಸ್ವಿ ರಿಯಾಲಿಟಿ ಶೋ ಬಿಗ್‌ಬಾಸ್‌ ತನ್ನ 10ನೇ ಆವೃತ್ತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು,ಈಗಾಗಲೇ ಇದರ ಪ್ರೋಮೋಗಳು ವೈರಲ್‌ ಆಗಿದ್ದು, ಈ ಸೀಸನ್‌ ಹಿಂದಿನ ಸೀಸನ್‌ಗಳಿಗಿಂತ ವಿಭಿನ್ನವಾಗಿರಲಿದೆ ಎಂದು ಹೇಳಲಾಗಿದ್ದು, ಬಿಗ್‌ಬಾಸ್‌ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಈ ಕಾರ್ಡ್‌ನಿಂದ ಸಿಗಲಿದೆ 5 ಲಕ್ಷದವರೆಗೆ ಉಚಿತ ಚಿಕತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಅರ್ಜಿ ಹಾಕಿ

ಕಿಚ್ಚ ಸುದೀಪ್‌ ವೀಕೆಂಡ್‌ ಪಂಚಾಯಿತಿ ನಡೆಸಿಕೊಡಲಿದ್ದು, ಅಕ್ಟೋಬರ್‌ 8 ರಂದು ಹೊಸ ಸೀಸನ್‌ ಆರಂಭವಾಗಲಿದೆ. ಈ ಸೀಸನ್‌ನಲ್ಲಿ ಯಾರೆಲ್ಲಾ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡುತ್ತಾರೆ ಅನ್ನುವ ಕುತೂಹಲವಿದ್ದರೂ, ಕೆಲ ಹೆಸರುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿವೆ.

BIGG BOSS Season 10

BIGG BOSS Season 10: ಬಿಗ್‌ಬಾಸ್‌ ಮನೆಗೆ ʻಕಾಂತಾರʼ ನಟ?

ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್‌-10 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು,ಕಂಟೆಸ್ಟಂಟ್‌ಗಳ ಬಗ್ಗೆ ಚರ್ಚೆಯಾಗುತ್ತಿದ್ದು, ಕಾಂತಾರ ನಟ ಪ್ರಕಾಶ್‌ ತುಮಿನಾಡು ಬಿಗ್‌ಬಾಸ್‌ ಮನೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಪ್ರಕಾಶ್‌, ವಾಹಿನಿ ಕಡೆಯಿಂದಾಗಲಿ ಅಧಿಕೃತ ಹೇಳಿಕೆಗಳು ಬಂದಿಲ್ಲ. ಪ್ರಕಾಶ್‌ ಕಾಂತಾರದಲ್ಲಿ ರಾಂಪ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗಿಸಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ರಾಮಣ್ಣ ರೈ ಪಾತ್ರ ನಿಭಾಯಿಸಿ ಮನೆ ಮಾತಾಗಿದ್ದರು.

ಇದನ್ನು ಓದಿ: ಖ್ಯಾತ ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ, ಪತಿಯ ಅಚ್ಚರಿಯ ಹೇಳಿಕೆ

BIGG BOSS Season 10: ಬಿಗ್‌ಬಾಸ್‌ ಮನೆಗೆ ಯಾರೆಲ್ಲಾ ಎಂಟ್ರಿ?

ಇನ್ನು, ಬಿಗ್​ಬಾಸ್​ ಸೀಸನ್​ 10ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ಗಟ್ಟಿಮೇಳ ಧಾರಾವಾಹಿ ನಟಿ ಸ್ವಾತಿ, ನಟ ಶಿವರಾಜ್​ ಕೆ.ಆರ್ ​ಪೇಟೆ, ನಟಿ ರೂಪಾ ರಾಯಪ್ಪ, ನಟ ಸುನೀಲ್​ ರಾವ್​, ಕ್ರಿಕೆಟಿಗ​​​​ ವಿನಯ್ ​ಕುಮಾರ್​, ಬುಲೆಟ್​ ಪ್ರಕಾಶ್ ಮಗ ರಕ್ಷಕ್​, ರ‍್ಯಾಪರ್ ​​ ಇಶಾನಿ, ಮಿಮಿಕ್ರಿ ಆರ್ಟಿಸ್ಟ್​ ಗೋಪಿ, ರಾಜೇಶ್​ ಧ್ರುವ, ನಮ್ರತಾ ಗೌಡ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version