ಚುನಾವಣೆಗೆ ಜನರನ್ನು ಸೆಳೆಯಲು ಸರ್ಕಾರ ಅನೇಕ ಭರವಸೆಗಳನ್ನು ನೀಡುತ್ತಿದ್ದು, ಈಗ ರೈತರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ರೈತ ಶಕ್ತಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ಹೌದು, ರೈತ ಶಕ್ತಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿಗಿದ್ದು, ಕೃಷಿ ಯಾಂತ್ರೀಕರಣಗೊಳ್ಳುತ್ತಿದ್ದು, ಡೀಸೆಲ್ ಮೇಲೆ ಕೃಷಿ ಚಟುವಟಿಕೆ ಅವಲಂಬಿತವಾಗಿದೆ. ಆದ್ದರಿಂದ ಪ್ರತಿ ಎಕರೆಗೆ 250 ರೂ. ನಂತೆ 5 ಎಕರೆಗೆ ಆಗುವಷ್ಟು ಹಣವನ್ನು ಡೀಸೆಲ್ ಸಬ್ಸಿಡಿಗೆ ಸಹಾಯಧನವನ್ನಾಗಿ ನೀಡಲು ಈ ಯೋಜನೆ ರೂಪಿಸಲಾಗಿದೆ.