ಸ್ಯಾಂಡಲ್ವುಡ್ ನಟಿ, ಮಾಜಿ ಸಂಸದೆ ಮೋಹಕ ತಾರೆ ರಮ್ಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಅನ್ನುವ ಸುದ್ದಿ ಜೋರಾಗಿ ಕೇಳಿ ಬರುತ್ತಿದ್ದು, ಚಿಕ್ಕಬಳ್ಳಾಪುರ ಉತ್ಸವದಲ್ಲಿ ಸಚಿವ ಸುಧಾಕರ್ ಅವರನ್ನು ಹೊಗಳಿದ ಬಳಿಕ ಇದಕ್ಕೆ ಪುಷ್ಠಿ ಸಿಕ್ಕಿದೆ ಎಂದು ವರದಿಯಾಗಿದೆ.
ಹೌದು, ಚಿಕ್ಕಬಳ್ಳಾಪುರ ಉತ್ಸವದಲ್ಲಿ ಸಚಿವ ಸುಧಾಕರ್ ಮಾಡಿರುವ ಕೆಲಸಗಳನ್ನು ಹೊಗಳಿರುವ ರಮ್ಯಾ, ಅವರ ಮೂಲಕವೇ ಕಮಲ ಪಕ್ಷ ಸೇರುತ್ತಾರೆ ಅನ್ನುವ ಗುಸುಗುಸು ಆರಂಭವಾಗಿದೆ. ರಮ್ಯಾ ಹೊಗಳಿಕೆ ಕಾಂಗ್ರೆಸ್ ಪಕ್ಷದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.