ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕು ಕಚೇರಿ ವ್ಯಾಪ್ತಿಯ ಭೂದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಸರ್ವೇಯರ್ ಉದಯ್ ಚೌಧರಿ ಅವರನ್ನು ಸೋಮವಾರ ಈ-ಸ್ವತ್ತು ಅಳತೆ ಮಾಡಲು ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹರಳಹಳ್ಳಿ ಗ್ರಾಮದ ದೇವೇಂದ್ರಗೌಡ ಎಂಬುವರು ತಮ್ಮ ಮನೆಯ ಈ-ಸ್ವತ್ತು ಮಾಡಲು ಅಳತೆಗಾಗಿ ಅರ್ಜಿ ಸಲ್ಲಿಸಿದ್ದು, ಈ ಕೆಲಸ ಮಾಡಲು ಉದಯ ಚೌಧರಿ 3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ರಾಷ್ಟ್ರಪತಿ ಮತ್ತು ಎನ್.ಎಚ್. ಆಂಜನೇಯ ಅವರು ಆರೋಪಿಯನ್ನು ಬಂಧಿಸಿದ್ದು,ತನಿಖೆ ಮುಂದುವರಿದಿದೆ. ಇನ್ನು, ಬಂಧಿತ ಸರ್ವೇಯರ್ ಉದಯ್ ಚೌಧರಿ ದಾವಣಗೆರೆಯ ಆವರಗೆರೆ ಟೀಚರ್ ಕಾಲೋನಿ ನಿವಾಸಿ.