ವಿಜಯನಗರ : ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಮಹೋತ್ಸವವು ಫೆಬ್ರುವರಿ 07 ರಂದು ವಿಜೃಂಭಣೆಯಿಂದ ಜರುಗಲಿದೆ.
ಜನವರಿ 28 ರಂದು ರಥಸಪ್ತಮಿ, ಕಡುಬಿನ ಕಾಳಗ ನಡೆಯಲಿದ್ದು, ಫೆಬ್ರುವರಿ 05 ರಂದು ಭರತ ಹುಣ್ಣಿಮೆ, ಧ್ವಜಾರೋಹಣ. ಫೆಬ್ರುವರಿ 06 ರಂದು ತ್ರಿಶೂಲಪೂಜೆ ಹಾಗು ಫೆಬ್ರುವರಿ 07 ರಂದು ಶ್ರೀಸ್ವಾಮಿಯ ಮಲ್ಲಾಸುರನ ಸಂಹಾರಕ್ಕೆ ಡೆಂಕನ ಮರಡಿಗೆ ಗುಪ್ತಮೌನ ಸವಾರಿ ನಡೆಯಲಿದೆ.
ಇನ್ನು, ಸಂಜೆ 5-30 ಕ್ಕೆ ಶ್ರೀಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ಗುರುಪರಂಪರ್ಯ ಗುರುಗಳಿಂದ ಭಂಡಾರ ಆಶೀರ್ವಾದ ನಂತರ ಗೊರವಯ್ಯನವರಿಂದ ಕಾರ್ಣಿಕ ನುಡಿಯುವುದು ಎಂದು ತಿಳಿಸಿದೆ.