ಬೆಂಗಳೂರು: ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರ ಪೈಕಿ 15 ಸಾವಿರ ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2021-22 ನೇ ಸಾಲಿನಲ್ಲಿ ಆದ್ಯತಾ ಕಾರ್ಡ್ಗೆ 7,61,902 ಅರ್ಜಿ ಸ್ವೀಕರಿಸಿದ್ದು,ಈ ಪೈಕಿ 1,57.628 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನವಂಬರ್ 28ರಂದು ಅರ್ಹ ಅರ್ಜಿದಾರರಿಗೆ ಹೊಸದಾಗಿ ಕಾರ್ಡ್ ವಿತರಿಸಲು ಆದೇಶ ಹೊರಡಿಸಿದೆ ಎಂದರು.