ಬಂಗಾಳಕೊಲ್ಲಿಯಲ್ಲಿ ಚಂಡ ಮಾರುತ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ದಕ್ಷಿಣ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದು, ನಾಳೆ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ರಾಜ್ಯದ ಕರಾವಳಿ ಮಲೆನಾಡು ಸೇರಿದಂತೆ ವಿವಿಧೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಆಗುವ ಸಾಧ್ಯೆತೆ ಇದ್ದು, ಬಳ್ಳಾರಿ, ಗೋಕರ್ಣ, ಹಂಪಿ, ಹೊನ್ನಾವರ, ಕಾರವಾರ, ಮಡಿಕೇರಿ, ಮಂಡ್ಯ, ಮಂಗಳೂರು, ಹಾಗೂ ಮೈಸೂರಿನಲ್ಲಿ ಮಳೆಯಾಗಲಿದೆ.
ಇನ್ನು, ಬಾದಾಮಿ, ಬೆಳಗಾವಿ, ಬೆಂಗಳೂರು ನಗರ, ಗದಗ, ಬೀದರ್, ಧಾರವಾಡ, ಗದಗದಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದ್ದು, ಉಳಿದಂತೆ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇರಲಿದೆ.
ಪ್ರಮುಖ ನಗರಗಳ ತಾಪಮಾನ ವರದಿ :
ಬೆಂಗಳೂರು: 27-19, ಮಂಗಳೂರು: 31-24, ಶಿವಮೊಗ್ಗ: 31-21, ಬೆಳಗಾವಿ: 29-21, ಮೈಸೂರು: 28-19, ಮಂಡ್ಯ: 28-20, ಮಡಿಕೇರಿ: 25-17, ರಾಮನಗರ: 28-20, ಹಾಸನ: 27-19, ಚಾಮರಾಜನಗರ: 28-20, ಚಿಕ್ಕಬಳ್ಳಾಪುರ: 27-19, ಕೋಲಾರ: 27-19, ಚಿತ್ರದುರ್ಗ: 29-21, ಹಾವೇರಿ: 30-21, ಬಳ್ಳಾರಿ: 30-22, ಗದಗ: 29-21, ಕೊಪ್ಪಳ: 30-22, ರಾಯಚೂರು: 31-22 ಡಿಗ್ರಿ ಸೆಲ್ಸಿಯಸ್ ಇರಲಿದೆ.